<p><strong>ಮಾನ್ವಿ:</strong>ಮಾನ್ವಿ ಪಟ್ಟಣದ ಮೂಲಕ ಹಾದುಹೋಗಿರುವ ರಾಜ್ಯ ಹೆದ್ದಾರಿಯ ವಿಭಜಕದ ಮೇಲೆ ಹಾಗೂ ಹೆದ್ದಾರಿಯ ಬದಿಯಲ್ಲಿ ಬೆಳೆದು ನಿಂತಿರುವ ಗಿಡಗಳು ಎಲ್ಲರ ಗಮನ ಸೆಳೆಯುತ್ತಿವೆ.</p>.<p>ಪಟ್ಟಣದ ಆಟೊ ನಗರದಿಂದ ಎಪಿಎಂಸಿ ವರೆಗಿನ ರಸ್ತೆ ವಿಭಜಕದ ಮೇಲೆ ಈ ಸಾಲು ಗಿಡಗಳು ಕಾಣುತ್ತವೆ. ರಸ್ತೆಯುದ್ದಕ್ಕೂ ಸಾಲು ಸಾಲಾಗಿ ಕಾಣುವ ಗಿಡಗಳು ರಸ್ತೆಯ ಸೊಬಗನ್ನು ಹೆಚ್ಚಿಸಿವೆ. ನಂತರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹಿರೇಕೊಟ್ನೇಕಲ್, ಪೋತ್ನಾಳದವರೆಗೆ ರಾಜ್ಯ ಹೆದ್ದಾರಿಯ ಬದಿಯಲ್ಲಿ ಸಾವಿರಾರು ಗಿಡಗಳನ್ನು ಬೆಳೆಸಲಾಗಿದೆ.</p>.<p>ರಸ್ತೆಯುದ್ದುಕ್ಕೂ ಕಂಡು ಬರುವ ಬೇವು, ಹೊಂಗೆ, ತಪಸಿ, ಬಸವನಪಾದ, ಆರಳಿ ಗಿಡ, ಆಲದ ಗಿಡ, ಕಣಗಿಲೆ ಗಿಡ, ಇತರ ಅಲಂಕಾರಿಕ ಗಿಡಗಳು ಪ್ರಯಾಣಿಕರು ಹಾಗೂ ವಾಹನ ಸವಾರರ ಗಮನ ಸೆಳೆಯುತ್ತವೆ.</p>.<p>ವರ್ಷದ ಹಿಂದೆ ಅರಣ್ಯ ಇಲಾಖೆಯ ಅಧಿಕಾರಿ ರಾಜೇಶ್ ನಾಯಕ ಹಾಗೂ ಸಿಬ್ಬಂದಿ ವಿಶೇಷ ಆಸಕ್ತಿವಹಿಸಿ ರಸ್ತೆ ವಿಭಜಕದ ಮೇಲೆ ಹಾಗೂ ರಸ್ತೆ ಬದಿಯ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟಿದ್ದರು. ಅಂದು ನೆಟ್ಟಿದ್ದ ಸಸಿಗಳು ಈಗ ಗಿಡಗಳಾಗಿ ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.</p>.<p>ಸಾಲು ಗಿಡಗಳು ಆಕರ್ಷಕವಾಗಿ ಕಾಣುವ ಮೂಲಕ ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಿವೆ. ಬಿಡಾಡಿ ದನಗಳು ತಿನ್ನದಂತೆ ಹಾಗೂ ನೀರಿನ ಸಮಸ್ಯೆಯಿಂದ ಒಣಗದಂತೆ ಸಸಿಗಳ ನಿರ್ವಹಣೆ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಅಧಿಕಾರಿ ಹಾಗೂ ಸಿಬ್ಬಂದಿ ಸರ್ಕಾರದ ಯೋಜನೆ ಅಡಿಯಲ್ಲಿ ಈ ಸಾಲು ಗಿಡಗಳನ್ನು ಬೆಳೆಸದೆ ಸ್ವಯಂ ಪ್ರೇರಣಿ ಹಾಗೂ ಪರಿಸರದ ಕುರಿತು ಕಾಳಜಿಯಿಂದ ಬೆಳೆಸಿರುವುದು ಗಮನಾರ್ಹ. ವಲಯ ಅರಣ್ಯಾಧಿಕಾರಿ ರಾಜೇಶ್ ನಾಯಕ ಹಾಗೂ ಇಲಾಖೆಯ ಗುತ್ತಿಗೆ ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾನ್ವಿ:</strong>ಮಾನ್ವಿ ಪಟ್ಟಣದ ಮೂಲಕ ಹಾದುಹೋಗಿರುವ ರಾಜ್ಯ ಹೆದ್ದಾರಿಯ ವಿಭಜಕದ ಮೇಲೆ ಹಾಗೂ ಹೆದ್ದಾರಿಯ ಬದಿಯಲ್ಲಿ ಬೆಳೆದು ನಿಂತಿರುವ ಗಿಡಗಳು ಎಲ್ಲರ ಗಮನ ಸೆಳೆಯುತ್ತಿವೆ.</p>.<p>ಪಟ್ಟಣದ ಆಟೊ ನಗರದಿಂದ ಎಪಿಎಂಸಿ ವರೆಗಿನ ರಸ್ತೆ ವಿಭಜಕದ ಮೇಲೆ ಈ ಸಾಲು ಗಿಡಗಳು ಕಾಣುತ್ತವೆ. ರಸ್ತೆಯುದ್ದಕ್ಕೂ ಸಾಲು ಸಾಲಾಗಿ ಕಾಣುವ ಗಿಡಗಳು ರಸ್ತೆಯ ಸೊಬಗನ್ನು ಹೆಚ್ಚಿಸಿವೆ. ನಂತರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹಿರೇಕೊಟ್ನೇಕಲ್, ಪೋತ್ನಾಳದವರೆಗೆ ರಾಜ್ಯ ಹೆದ್ದಾರಿಯ ಬದಿಯಲ್ಲಿ ಸಾವಿರಾರು ಗಿಡಗಳನ್ನು ಬೆಳೆಸಲಾಗಿದೆ.</p>.<p>ರಸ್ತೆಯುದ್ದುಕ್ಕೂ ಕಂಡು ಬರುವ ಬೇವು, ಹೊಂಗೆ, ತಪಸಿ, ಬಸವನಪಾದ, ಆರಳಿ ಗಿಡ, ಆಲದ ಗಿಡ, ಕಣಗಿಲೆ ಗಿಡ, ಇತರ ಅಲಂಕಾರಿಕ ಗಿಡಗಳು ಪ್ರಯಾಣಿಕರು ಹಾಗೂ ವಾಹನ ಸವಾರರ ಗಮನ ಸೆಳೆಯುತ್ತವೆ.</p>.<p>ವರ್ಷದ ಹಿಂದೆ ಅರಣ್ಯ ಇಲಾಖೆಯ ಅಧಿಕಾರಿ ರಾಜೇಶ್ ನಾಯಕ ಹಾಗೂ ಸಿಬ್ಬಂದಿ ವಿಶೇಷ ಆಸಕ್ತಿವಹಿಸಿ ರಸ್ತೆ ವಿಭಜಕದ ಮೇಲೆ ಹಾಗೂ ರಸ್ತೆ ಬದಿಯ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟಿದ್ದರು. ಅಂದು ನೆಟ್ಟಿದ್ದ ಸಸಿಗಳು ಈಗ ಗಿಡಗಳಾಗಿ ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.</p>.<p>ಸಾಲು ಗಿಡಗಳು ಆಕರ್ಷಕವಾಗಿ ಕಾಣುವ ಮೂಲಕ ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಿವೆ. ಬಿಡಾಡಿ ದನಗಳು ತಿನ್ನದಂತೆ ಹಾಗೂ ನೀರಿನ ಸಮಸ್ಯೆಯಿಂದ ಒಣಗದಂತೆ ಸಸಿಗಳ ನಿರ್ವಹಣೆ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಅಧಿಕಾರಿ ಹಾಗೂ ಸಿಬ್ಬಂದಿ ಸರ್ಕಾರದ ಯೋಜನೆ ಅಡಿಯಲ್ಲಿ ಈ ಸಾಲು ಗಿಡಗಳನ್ನು ಬೆಳೆಸದೆ ಸ್ವಯಂ ಪ್ರೇರಣಿ ಹಾಗೂ ಪರಿಸರದ ಕುರಿತು ಕಾಳಜಿಯಿಂದ ಬೆಳೆಸಿರುವುದು ಗಮನಾರ್ಹ. ವಲಯ ಅರಣ್ಯಾಧಿಕಾರಿ ರಾಜೇಶ್ ನಾಯಕ ಹಾಗೂ ಇಲಾಖೆಯ ಗುತ್ತಿಗೆ ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>