<p>ಪ್ರಜಾವಾಣಿ ವಾರ್ತೆ</p>.<p>ಕವಿತಾಳ: ಪಟ್ಟಣದಲ್ಲಿ ವಾಸವಿ ಜಯಂತಿಯನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.</p>.<p>ಇಲ್ಲಿನ ತ್ರಯಂಭಕೇಶ್ವರ ದೇವಸ್ಥಾನದಿಂದ ವಾಸವಿ ದೇವಸ್ಥಾನದವರೆಗೆ ಕನ್ಯಕಾ ಪರಮೇಶ್ವರಿಯ ಭಾವಚಿತ್ರದ ಮೆರವಣಿಗೆ ಕುಂಭ, ಕಳಸಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಯುವಕರ ಭಜನೆ ಹಾಡುಗಳು ಮೆರವಣಿಗೆಗೆ ಮೆರಗು ನೀಡಿತು.</p>.<p>ಜಯಂತಿ ನಿಮಿತ್ತ ವಾಸವಿ ಮೂರ್ತಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾ ಮಂಗಳಾರತಿ, ತೊಟ್ಟಿಲು ಸೇವೆ ಮತ್ತು ಮಹಿಳೆಯರ ಕೋಲಾಟ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಅರ್ಚಕ ಜಯತೀರ್ಥ ಆಚಾರ್ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.</p>.<p>ಆರ್ಯವೈಶ್ಯ ಸಮಾಜದ ವತಿಯಿಂದ ಪಟ್ಟಣ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು.</p>.<p>ಗುರುರಾಜ ಬಾಗೋಡಿ, ಶ್ರೀಧರ ಮಾನ್ವಿ, ಶಿವರಾಮಯ್ಯ, ಪುರುಷೋತ್ತಮ ಇಲ್ಲೂರು, ಲಕ್ಷ್ಮೀಕಾಂತ ಇಲ್ಲೂರು, ಲಿಂಗರಾಜ ಇಲ್ಲೂರು, ರಮೇಶ ಇಲ್ಲೂರು, ಬಿ.ಕೆ.ವೆಂಕಟೇಶ, ಎಂ.ರಾಘವೇಂದ್ರ, ಪ್ರಕಾಶ ಇಲ್ಲೂರು, ಅಮರೇಶ, ಮಲ್ಕಾಜಯ್ಯ, ರವಿ, ವೆಂಕಟೇಶ ಬಾಗೋಡಿ, ಅರವಿಂದ್ ಇಲ್ಲೂರು, ವೆಂಕಟೇಶ ಇಲ್ಲೂರು, ಗುರುರಾಜ ಇಲ್ಲೂರು , ಮಂಜುಳಾ ಇಲ್ಲೂರು, ರಜನಿ ಕೋಸ್ಗಿ, ಭಾಗ್ಯಲಕ್ಷ್ಮೀ, ಪ್ರಮೀಳಾ ಮತ್ತು ಸುಮಾ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p>ಕವಿತಾಳ: ಪಟ್ಟಣದಲ್ಲಿ ವಾಸವಿ ಜಯಂತಿಯನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.</p>.<p>ಇಲ್ಲಿನ ತ್ರಯಂಭಕೇಶ್ವರ ದೇವಸ್ಥಾನದಿಂದ ವಾಸವಿ ದೇವಸ್ಥಾನದವರೆಗೆ ಕನ್ಯಕಾ ಪರಮೇಶ್ವರಿಯ ಭಾವಚಿತ್ರದ ಮೆರವಣಿಗೆ ಕುಂಭ, ಕಳಸಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಯುವಕರ ಭಜನೆ ಹಾಡುಗಳು ಮೆರವಣಿಗೆಗೆ ಮೆರಗು ನೀಡಿತು.</p>.<p>ಜಯಂತಿ ನಿಮಿತ್ತ ವಾಸವಿ ಮೂರ್ತಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾ ಮಂಗಳಾರತಿ, ತೊಟ್ಟಿಲು ಸೇವೆ ಮತ್ತು ಮಹಿಳೆಯರ ಕೋಲಾಟ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಅರ್ಚಕ ಜಯತೀರ್ಥ ಆಚಾರ್ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.</p>.<p>ಆರ್ಯವೈಶ್ಯ ಸಮಾಜದ ವತಿಯಿಂದ ಪಟ್ಟಣ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು.</p>.<p>ಗುರುರಾಜ ಬಾಗೋಡಿ, ಶ್ರೀಧರ ಮಾನ್ವಿ, ಶಿವರಾಮಯ್ಯ, ಪುರುಷೋತ್ತಮ ಇಲ್ಲೂರು, ಲಕ್ಷ್ಮೀಕಾಂತ ಇಲ್ಲೂರು, ಲಿಂಗರಾಜ ಇಲ್ಲೂರು, ರಮೇಶ ಇಲ್ಲೂರು, ಬಿ.ಕೆ.ವೆಂಕಟೇಶ, ಎಂ.ರಾಘವೇಂದ್ರ, ಪ್ರಕಾಶ ಇಲ್ಲೂರು, ಅಮರೇಶ, ಮಲ್ಕಾಜಯ್ಯ, ರವಿ, ವೆಂಕಟೇಶ ಬಾಗೋಡಿ, ಅರವಿಂದ್ ಇಲ್ಲೂರು, ವೆಂಕಟೇಶ ಇಲ್ಲೂರು, ಗುರುರಾಜ ಇಲ್ಲೂರು , ಮಂಜುಳಾ ಇಲ್ಲೂರು, ರಜನಿ ಕೋಸ್ಗಿ, ಭಾಗ್ಯಲಕ್ಷ್ಮೀ, ಪ್ರಮೀಳಾ ಮತ್ತು ಸುಮಾ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>