ಕೊರೊನಾ ಮಾರಿ ಹೋಗುವತನಕ ಕಾಯಿಪಲ್ಲೆ ಮಾರಾಟಕ್ಕೆ ಹತ್ತಿ ಮಾರ್ಕೆಟ್ ತಾತ್ಕಾಲಿಕ ಎಂದು ಹೇಳುತ್ತಲೇ ಬರಲಾಗಿದೆ. ಆದರೆ, ಗ್ರಾಮೀಣ ರೈತರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿಯೂ ವಿದ್ಯುತ್ ದೀಪಗಳನ್ನು ಅಳವಡಿಸುತ್ತಿಲ್ಲ. ತಾಜಾ ತರಕಾರಿ ಖರೀದಿಸುವುದಕ್ಕಾಗಿ ಸಾಮಾನ್ಯ ಜನರು ಕೂಡಾ ರೈತ ಸಂತೆಗೆ ಹೋಗಿ ಬರುತ್ತಾರೆ. ನಗರದಲ್ಲಿ ಜನದಟ್ಟಣೆ ತಪ್ಪಿಸುವುದಕ್ಕಾಗಿ ರೈತ ಸಂತೆ ಸ್ಥಳಾಂತರ ಮಾಡಿದ್ದರೂ ಉದ್ದೇಶ ಈಡೇರಿಲ್ಲ. ಅಲ್ಲಿಯೂ ನಿತ್ಯ ದಟ್ಟಣೆ ಇದ್ದೇ ಇರುತ್ತದೆ. ನಗರದಲ್ಲಿ ಮಾರ್ಕಿಂಗ್ ಮಾಡಿದರೆ, ಅಂತರ ಕಾಪಾಡಲು ಸಾಧ್ಯವಾಗುತ್ತದೆ.