ರಾಯಚೂರು ಜಿಲ್ಲೆಯ ಮುದಗಲ್ ನಲ್ಲಿ ನಡೆದ ಮೊಹರಂ ಹಬ್ಬ ಮಾನವೀಯ ಮೌಲ್ಯ, ಕೋಮು ಸೌಹಾರ್ದತೆ, ಹಿಂದೂ-ಮುಸ್ಲಿಮರ ನಡುವೆ ಭಾವನಾತ್ಮಕ ಸಂಬಂಧಗಳನ್ನು ಬೆಸೆಯಿತು. ವಿಶಿಷ್ಟ ಆಚರಣೆ ಮೊಹರಂ ವೀಕ್ಷಿಸಲು ದೇಶ ವಿದೇಶದ ಜನ ಇಲ್ಲಿಗೆ ಆಗಮಿಸುತ್ತಾರೆ. ಜಿಲ್ಲೆ ಹಾಗೂ ತಾಲ್ಲೂಕು ಆಡಳಿತ ಜತೆ ಜತೆಯಾಗಿ ಆಯೋಜಿಸುವ ಕಾರ್ಯಕ್ರಮದಲ್ಲಿ ಹಿಂದೂ-ಮುಸ್ಲಿಮರು ಭಾವೈಕ್ಯದಿಂದ ಪಾಲ್ಗೊಳ್ಳುವುದೇ ಇಲ್ಲಿಯ ವಿಶೇಷತೆ.