<p>ಕವಿತಾಳ: ಸಮೀಪದ ಹಿರೇಹಣಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಸೇನಪುರ ಗ್ರಾಮದಲ್ಲಿ ಕೊಳವೆಬಾವಿಯ ಮೋಟಾರು ಕೆಟ್ಟ ಪರಿಣಾಮ ಮೂರು ದಿನಗಳಿಂದ ನೀರಿನ ಸಮಸ್ಯೆ ತೀವ್ರವಾಗಿದೆ.</p>.<p>ಗ್ರಾಮಕ್ಕೆ ನೀರು ಪೂರೈಸುವ ಎರಡು ಕೊಳವೆಬಾವಿಗಳ ಪೈಕಿ ಒಂದರಲ್ಲಿ ಅಂತರ್ಜಲ ಕುಸಿತವಾಗಿದೆ. ಇನ್ನೊಂದು ಕೊಳವೆಬಾವಿಯ ಮೋಟಾರು ಕೆಟ್ಟಿದ್ದರಿಂದ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳು ನೀರಿಗಾಗಿ ಕೊಡ ಹಿಡಿದು ಹೊಲಗಳಿಗೆ ಅಲೆಯುವಂತಾಗಿದೆ.</p>.<p>ಗ್ರಾಮದ ಹನುಮಂತ ಪೂಜಾರಿ ಅವರು ತಮ್ಮ ಜಮೀನಲ್ಲಿನ ಕೊಳವೆಬಾವಿಯ ನೀರು ಹಿಡಿಯಲು ಸಾರ್ವಜನಿಕರಿಗೆ ಅವಕಾಶ ನೀಡಿದ್ದು ಭಾನುವಾರ ಬೆಳಿಗ್ಗೆ ನೀರು ಹಿಡಿದುಕೊಳ್ಳಲು ಮಹಿಳೆಯರು ಮಕ್ಕಳು ಪರದಾಡುತ್ತಿರುವ ದೃಶ್ಯ ಕಂಡು ಬಂತು.</p>.<p>‘ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಗಿತವಾಗಿದೆ. ಸದ್ಯ ಕೊಳವೆಬಾವಿ ಕೆಟ್ಟಿದ್ದರಿಂದ ಬಳಕೆ ನೀರಿಗೂ ಸಮಸ್ಯೆ ಎದುರಾಗಿದೆ. ಮನೆ ಕೆಲಸ ಬಿಟ್ಟು ಬಿಸಿಲಿನಲ್ಲಿ ಸುತ್ತಮುತ್ತಲಿನ ಜಮೀನುಗಳಿಗೆ ಹೋಗಿ ನೀರು ತರುವಂತಾಗಿದೆ’ ಎಂದು ಬಸ್ಸಮ್ಮ, ಶಂಕ್ರಮ್ಮ, ಅಂಬಮ್ಮ, ದುರುಗಮ್ಮ ಮತ್ತು ಹನುಮಂತಿ ಆರೋಪಿಸಿದರು.</p>.<p>‘ವಿದ್ಯುತ್ ವ್ಯತಯದಿಂದ ಕೊಳವೆಬಾವಿ ಕೆಟ್ಟಿದೆ. ದುರಸ್ತಿ ಮಾಡಲಾಗುತ್ತಿದ್ದು ನೀರು ಪೂರೈಕೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂಜೀವರಡ್ಡಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕವಿತಾಳ: ಸಮೀಪದ ಹಿರೇಹಣಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಸೇನಪುರ ಗ್ರಾಮದಲ್ಲಿ ಕೊಳವೆಬಾವಿಯ ಮೋಟಾರು ಕೆಟ್ಟ ಪರಿಣಾಮ ಮೂರು ದಿನಗಳಿಂದ ನೀರಿನ ಸಮಸ್ಯೆ ತೀವ್ರವಾಗಿದೆ.</p>.<p>ಗ್ರಾಮಕ್ಕೆ ನೀರು ಪೂರೈಸುವ ಎರಡು ಕೊಳವೆಬಾವಿಗಳ ಪೈಕಿ ಒಂದರಲ್ಲಿ ಅಂತರ್ಜಲ ಕುಸಿತವಾಗಿದೆ. ಇನ್ನೊಂದು ಕೊಳವೆಬಾವಿಯ ಮೋಟಾರು ಕೆಟ್ಟಿದ್ದರಿಂದ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳು ನೀರಿಗಾಗಿ ಕೊಡ ಹಿಡಿದು ಹೊಲಗಳಿಗೆ ಅಲೆಯುವಂತಾಗಿದೆ.</p>.<p>ಗ್ರಾಮದ ಹನುಮಂತ ಪೂಜಾರಿ ಅವರು ತಮ್ಮ ಜಮೀನಲ್ಲಿನ ಕೊಳವೆಬಾವಿಯ ನೀರು ಹಿಡಿಯಲು ಸಾರ್ವಜನಿಕರಿಗೆ ಅವಕಾಶ ನೀಡಿದ್ದು ಭಾನುವಾರ ಬೆಳಿಗ್ಗೆ ನೀರು ಹಿಡಿದುಕೊಳ್ಳಲು ಮಹಿಳೆಯರು ಮಕ್ಕಳು ಪರದಾಡುತ್ತಿರುವ ದೃಶ್ಯ ಕಂಡು ಬಂತು.</p>.<p>‘ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಗಿತವಾಗಿದೆ. ಸದ್ಯ ಕೊಳವೆಬಾವಿ ಕೆಟ್ಟಿದ್ದರಿಂದ ಬಳಕೆ ನೀರಿಗೂ ಸಮಸ್ಯೆ ಎದುರಾಗಿದೆ. ಮನೆ ಕೆಲಸ ಬಿಟ್ಟು ಬಿಸಿಲಿನಲ್ಲಿ ಸುತ್ತಮುತ್ತಲಿನ ಜಮೀನುಗಳಿಗೆ ಹೋಗಿ ನೀರು ತರುವಂತಾಗಿದೆ’ ಎಂದು ಬಸ್ಸಮ್ಮ, ಶಂಕ್ರಮ್ಮ, ಅಂಬಮ್ಮ, ದುರುಗಮ್ಮ ಮತ್ತು ಹನುಮಂತಿ ಆರೋಪಿಸಿದರು.</p>.<p>‘ವಿದ್ಯುತ್ ವ್ಯತಯದಿಂದ ಕೊಳವೆಬಾವಿ ಕೆಟ್ಟಿದೆ. ದುರಸ್ತಿ ಮಾಡಲಾಗುತ್ತಿದ್ದು ನೀರು ಪೂರೈಕೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂಜೀವರಡ್ಡಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>