ಎಂಜಿನಿಯರ್ ವಿರುದ್ದ ಕ್ರಮಕ್ಕೆ ಆಗ್ರಹಿಸಿ ದೂರು
’ವಿವಿಧ ವಾರ್ಡ್ಗಳಲ್ಲಿ ನೀರು ಪೂರೈಕೆಯಲ್ಲಿ ಸತತ ವ್ಯತ್ತಯ, ಬೀದಿ ದೀಪಗಳ ಅಳವಡಿಕೆ ವಿಳಂಬ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಮಾಹಿತಿ ನೀಡಿದರೂ ಎಂಜಿನಿಯರ್ ನರಸಮ್ಮ ಅವರು ಸ್ಪಂದಿಸುತ್ತಿಲ್ಲ, ನೀರು ಪೂರೈಕೆ ಬಗ್ಗೆ ಹಾರಿಕೆ ಉತ್ತರ ನೀಡುವುದರ ಜತೆಗೆ ಬೀದಿ ದೀಪ ಅಳವಡಿಸಲು ಹದಿನೈದು ದಿನಗಳ ಕಾಲಾವಕಾಶ ಕೇಳುತ್ತಿದ್ದಾರೆ. ಹೀಗಾಗಿ ವಾರ್ಡ್ಗಳಲ್ಲಿ ಕತ್ತಲು ಆವರಿಸಿದೆ. ಸಾರ್ವಜನಿಕರ ಸಮಸ್ಯೆಗಳ ಕುರಿತು ಸದಸ್ಯರು ಮಾಹಿತಿ ನೀಡಿದರೂ ಸ್ಪಂದಿಸುತ್ತಿಲ್ಲ. ಕಾರಣ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಿಗೆ ಸೋಮವಾರ ದೂರು ಸಲ್ಲಿಸಿದ್ದಾಗಿ’ ಸದಸ್ಯರಾದ ರಮೇಶ ನಗನೂರು, ಯಲ್ಲಪ್ಪ ಮಾಡಗಿರಿ, ರಾಜೇಶ್ವರಿ ತಿಪ್ಪಯ್ಯಸ್ವಾಮಿ, ರಾಘವೇಂದ್ರ ಶೆಟ್ಟಿ, ಗೌರಮ್ಮ ಮೌನೇಶ, ಲಿಂಗರಾಜ ಕಂದಗಲ್ ಮತ್ತು ಹುಲಗವ್ವ ಮೌನೇಶ ಹೇಳಿದ್ದಾರೆ.