<p><strong>ರಾಯಚೂರು:</strong> ಶೂನ್ಯ ನೆರಳಿನ ವಿದ್ಯಮಾನ ವರ್ಷಕ್ಕೆ ಎರಡು ಬಾರಿ ಸಂಭವಿಸಲಿದ್ದು, ಚಟುವಟಿಕೆಗಳ ಮೂಲಕ ಭೂಮಿಯ ಸುತ್ತಳತೆ, ಭೂಮಿಯ ಪರಿಭ್ರಮಣ, ಶೂನ್ಯ ನೆರಳಿನ ಸಮಯ ಹಾಗೂ ಸೂರ್ಯನ ಚಲನೆ ಇತ್ಯಾದಿ ಅಳೆಯಬಹುದು ಎಂದು ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಅಜಿತ್ ಕುಮಾರ ತಿಳಿಸಿದರು.</p>.<p>ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ಶೂನ್ಯ ನೆರಳು ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಶೂನ್ಯ ನೆರಳಿನ ವಿದ್ಯಮಾನ ವರ್ಷಕ್ಕೆ ಎರಡು ಬಾರಿಸಂಭವಿಸಲಿದ್ದು, ಇದು ರಾಯಚೂರಿನಲ್ಲಿ ಗುರುವಾರ ಸಂಬಭಿಸಿದ್ದು ಪುನಃ ಆಗಸ್ಟ್ 07 ರಂದು ಸಂಭವಿಸಲಿದೆ. ಆದರೆ, ಆಗಸ್ಟ್ ತಿಂಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರುವುದರಿಂದ ಮೇ ತಿಂಗಳಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದರು.</p>.<p>ಕೇಂದ್ರದ ಶಿಕ್ಷಣ ಸಹಾಯಕ ವಿದ್ಯಾ ವಿದ್ಯಾರ್ಥಿಗಳಿಗೆ, ಶೂನ್ಯ ನೆರಳು ವಿದ್ಯಮಾನದ ಮಾಹಿತಿಯನ್ನು ನೀಡಿ, ಚಟುವಟಿಕೆಯನ್ನು ಹಮ್ಮಿಕೊಳ್ಳುವ ವಿಧಾನವನ್ನು ವಿವರಿಸಿದರು. ವಿದ್ಯಾರ್ಥಿಗಳು ಚಟುವಟಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಶೂನ್ಯ ನೆರಳಿನ ಸಮಯವನ್ನು ಕಂಡುಕೊಂಡರು ಹಾಗೂ ಅದನ್ನು ಪ್ರಸ್ತುತಪಡಿಸಿದರು.</p>.<p>ಭಾರತ ವಿಜ್ಞಾನ ಸಮಿತಿಯ ಜಿಲ್ಲಾ ಸಂಚಾಲಕ ಹಫೀಜುಲ್ಲಾ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ವಿಜ್ಞಾನ ಕೇಂದ್ರದ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.</p>.<p>ಈ ಚಟುವಟಿಕೆಗಳ ಮೂಲಕ ರಾಯಚೂರಿನಲ್ಲಿ ಶೂನ್ಯ ನೆರಳಿನ ಸಮಯ ಮಧ್ಯಾಹ್ನ 12 ಗಂಟೆ 17 ನಿಮಿಷಗಳು ಎಂದು ಪ್ರಾತ್ಯಕ್ಷಿಕೆ ಮೂಲಕ ಕಂಡುಕೊಳ್ಳಲಾಯಿತು.</p>.<p>ಈ ವೇಳೆ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ವಿಜ್ಞಾನ ಕೇಂದ್ರದ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಶೂನ್ಯ ನೆರಳಿನ ವಿದ್ಯಮಾನ ವರ್ಷಕ್ಕೆ ಎರಡು ಬಾರಿ ಸಂಭವಿಸಲಿದ್ದು, ಚಟುವಟಿಕೆಗಳ ಮೂಲಕ ಭೂಮಿಯ ಸುತ್ತಳತೆ, ಭೂಮಿಯ ಪರಿಭ್ರಮಣ, ಶೂನ್ಯ ನೆರಳಿನ ಸಮಯ ಹಾಗೂ ಸೂರ್ಯನ ಚಲನೆ ಇತ್ಯಾದಿ ಅಳೆಯಬಹುದು ಎಂದು ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಅಜಿತ್ ಕುಮಾರ ತಿಳಿಸಿದರು.</p>.<p>ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ಶೂನ್ಯ ನೆರಳು ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಶೂನ್ಯ ನೆರಳಿನ ವಿದ್ಯಮಾನ ವರ್ಷಕ್ಕೆ ಎರಡು ಬಾರಿಸಂಭವಿಸಲಿದ್ದು, ಇದು ರಾಯಚೂರಿನಲ್ಲಿ ಗುರುವಾರ ಸಂಬಭಿಸಿದ್ದು ಪುನಃ ಆಗಸ್ಟ್ 07 ರಂದು ಸಂಭವಿಸಲಿದೆ. ಆದರೆ, ಆಗಸ್ಟ್ ತಿಂಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರುವುದರಿಂದ ಮೇ ತಿಂಗಳಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದರು.</p>.<p>ಕೇಂದ್ರದ ಶಿಕ್ಷಣ ಸಹಾಯಕ ವಿದ್ಯಾ ವಿದ್ಯಾರ್ಥಿಗಳಿಗೆ, ಶೂನ್ಯ ನೆರಳು ವಿದ್ಯಮಾನದ ಮಾಹಿತಿಯನ್ನು ನೀಡಿ, ಚಟುವಟಿಕೆಯನ್ನು ಹಮ್ಮಿಕೊಳ್ಳುವ ವಿಧಾನವನ್ನು ವಿವರಿಸಿದರು. ವಿದ್ಯಾರ್ಥಿಗಳು ಚಟುವಟಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಶೂನ್ಯ ನೆರಳಿನ ಸಮಯವನ್ನು ಕಂಡುಕೊಂಡರು ಹಾಗೂ ಅದನ್ನು ಪ್ರಸ್ತುತಪಡಿಸಿದರು.</p>.<p>ಭಾರತ ವಿಜ್ಞಾನ ಸಮಿತಿಯ ಜಿಲ್ಲಾ ಸಂಚಾಲಕ ಹಫೀಜುಲ್ಲಾ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ವಿಜ್ಞಾನ ಕೇಂದ್ರದ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.</p>.<p>ಈ ಚಟುವಟಿಕೆಗಳ ಮೂಲಕ ರಾಯಚೂರಿನಲ್ಲಿ ಶೂನ್ಯ ನೆರಳಿನ ಸಮಯ ಮಧ್ಯಾಹ್ನ 12 ಗಂಟೆ 17 ನಿಮಿಷಗಳು ಎಂದು ಪ್ರಾತ್ಯಕ್ಷಿಕೆ ಮೂಲಕ ಕಂಡುಕೊಳ್ಳಲಾಯಿತು.</p>.<p>ಈ ವೇಳೆ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ವಿಜ್ಞಾನ ಕೇಂದ್ರದ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>