<p><strong>ಲಿಂಗಸುಗೂರ:</strong> ತಾಲ್ಲೂಕಿನ ಕಾಳಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಹೊಲದ ಬದುವಿನಲ್ಲಿ ಕಲ್ಲು ಹಾಕುವುದಕ್ಕೆ ಸಂಬಂಧಿಸಿ ವಾಗ್ವಾದ ನಡೆದಿತ್ತು.<br /> <br /> ಆಗ ಗರ್ಭಿಣಿ ಶಾಂತಮ್ಮ ಸಣ್ಣಪ್ಪ ವಡ್ಡರ್ ಜಗಳ ಬಿಡಿಸಲು ಹೋದಾಗ ನೂಕು ನುಗ್ಗಲು ನಡೆದ ವೇಳೆಯಲ್ಲಿ ಗರ್ಭಪಾತ ಆಗಲಿ ಎಂಬ ಉದ್ದೇಶದಿಂದಲೆ ಆರೋಪಿತರು ಗರ್ಭಿಣಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.<br /> <br /> 6ನೇ ತಿಂಗಳಿನಲ್ಲಿ ಮಹಿಳೆಗೆ ಗರ್ಭಪಾತವಾಗಿದ್ದು, ಹುಟ್ಟಿದ ಮಗು ಸಾವು ಬದುಕಿನ ಮಧ್ಯೆ ನರಳಾಡುತ್ತಿರುವುದು ವರದಿಯಾಗಿದೆ.<br /> <br /> ಮಗು ಜೀವಂತವಾಗಿದ್ದು ತಾಯಿ ಮತ್ತು ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮಗುವನ್ನು ಬಾಗಲಕೋಟೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯುವಂತೆ ಡಾ. ದಿಗಂಬರ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ. ಆದರೆ, ಸೋಮವಾರ ಮಧ್ಯಾಹ್ನದವರೆಗೂ ಮಗು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿರುವುದು ಕಂಡು ಬಂದಿತು.<br /> <br /> ಹಲ್ಲೆಗೊಳಗಾದ ಶಾಂತಮ್ಮ ನೀಡಿದ ದೂರಿನ ಮೇಲೆ ಮುಖ್ಯಪೇದೆ ದುರುಗಪ್ಪ ಒಟ್ಟು ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಹಿರಿಯ ಅಧಿಕಾರಿಗಳಿಗೆ ವಹಿಸಿಕೊಟ್ಟಿದ್ದಾರೆ. ಡಿವೈಎಸ್ಪಿ ಅನಿತಾ ಹದ್ದಣ್ಣವರ್, ಸಿಪಿಐ ಆರ್. ಪಂಚಾಕ್ಷರಯ್ಯ, ಪಿಎಸ್ಐ ಸಿದ್ಧರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರ:</strong> ತಾಲ್ಲೂಕಿನ ಕಾಳಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಹೊಲದ ಬದುವಿನಲ್ಲಿ ಕಲ್ಲು ಹಾಕುವುದಕ್ಕೆ ಸಂಬಂಧಿಸಿ ವಾಗ್ವಾದ ನಡೆದಿತ್ತು.<br /> <br /> ಆಗ ಗರ್ಭಿಣಿ ಶಾಂತಮ್ಮ ಸಣ್ಣಪ್ಪ ವಡ್ಡರ್ ಜಗಳ ಬಿಡಿಸಲು ಹೋದಾಗ ನೂಕು ನುಗ್ಗಲು ನಡೆದ ವೇಳೆಯಲ್ಲಿ ಗರ್ಭಪಾತ ಆಗಲಿ ಎಂಬ ಉದ್ದೇಶದಿಂದಲೆ ಆರೋಪಿತರು ಗರ್ಭಿಣಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.<br /> <br /> 6ನೇ ತಿಂಗಳಿನಲ್ಲಿ ಮಹಿಳೆಗೆ ಗರ್ಭಪಾತವಾಗಿದ್ದು, ಹುಟ್ಟಿದ ಮಗು ಸಾವು ಬದುಕಿನ ಮಧ್ಯೆ ನರಳಾಡುತ್ತಿರುವುದು ವರದಿಯಾಗಿದೆ.<br /> <br /> ಮಗು ಜೀವಂತವಾಗಿದ್ದು ತಾಯಿ ಮತ್ತು ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮಗುವನ್ನು ಬಾಗಲಕೋಟೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯುವಂತೆ ಡಾ. ದಿಗಂಬರ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ. ಆದರೆ, ಸೋಮವಾರ ಮಧ್ಯಾಹ್ನದವರೆಗೂ ಮಗು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿರುವುದು ಕಂಡು ಬಂದಿತು.<br /> <br /> ಹಲ್ಲೆಗೊಳಗಾದ ಶಾಂತಮ್ಮ ನೀಡಿದ ದೂರಿನ ಮೇಲೆ ಮುಖ್ಯಪೇದೆ ದುರುಗಪ್ಪ ಒಟ್ಟು ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಹಿರಿಯ ಅಧಿಕಾರಿಗಳಿಗೆ ವಹಿಸಿಕೊಟ್ಟಿದ್ದಾರೆ. ಡಿವೈಎಸ್ಪಿ ಅನಿತಾ ಹದ್ದಣ್ಣವರ್, ಸಿಪಿಐ ಆರ್. ಪಂಚಾಕ್ಷರಯ್ಯ, ಪಿಎಸ್ಐ ಸಿದ್ಧರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>