1980ರ ಅರಣ್ಯ ಸಂರಕ್ಷಣಾ ಕಾಯ್ದೆ ಬಳಸಿಕೊಂಡು ಅರಣ್ಯ ಇಲಾಖೆ ರಾಜ್ಯ ಮತ್ತು ಸಾಮಾನ್ಯ ಅರಣ್ಯ ಪ್ರದೇಶದಿಂದ ಬುಡಕಟ್ಟು ಜನಾಂಗದವರನ್ನು ಒಕ್ಕಲೆಬಿಸಲಾಗಿತ್ತು. ನಂತರ 2008ರಲ್ಲಿ 2006 ರ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿತು. ಈ ಕಾಯ್ದೆ ಸೆಕ್ಷನ್ 3(1)ಎಂ ಪ್ರಕಾರ ಹಿಂದೆ ಅರಣ್ಯ ಪ್ರದೇಶದಿಂದ ಒಕ್ಕಲೆಬಿಸಿರುವ ಜಾಗದಲ್ಲಿಯೇ ಅರಣ್ಯ ಭೂಮಿಯನ್ನು ಒಳಗೊಂಡಂತೆ ಅಲ್ಲಿಯೇ ಪುನರ್ ವಸತಿಯನ್ನು ಕಲ್ಪಿಸಲು
ಅವಕಾಶವಿದೆ. ಹೀಗಿದ್ದೂ ಅರಣ್ಯ ಇಲಾಖೆ ನಮಗೆ ನ್ಯಾಯ ಒದಗಿಸುತ್ತಿಲ್ಲ. ಅಗತ್ಯ ಸಾಕ್ಷ್ಯಗಳಿಗಳಿದ್ದರೂ ರಾಮನಗರ ವಲಯ ಅರಣ್ಯಾಧಿಕಾರಿಗಳು ಇದಕ್ಕೆ ಒಪ್ಪದೇ ಕಾನೂನುಬಾಹಿರ ಹಿಂಬರಹ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಕೃಷ್ಣಮೂರ್ತಿ, ಲಕ್ಷ್ಮಮ್ಮ, ದೇವಯ್ಯ, ನವಣಯ್ಯ, ಈರಮ್ಮ, ಮಾದಮ್ಮ, ಮಹದೇವಮ್ಮ, ಜೆ.ಎನ್. ಶಿವರಾಜು, ಶಿವಮಾದಮ್ಮ ಇದ್ದರು.