ಮಾಗಡಿ: ತಾಲ್ಲೂಕಿನ ಹುಚ್ಚಹನುಮೇಗೌಡನ ಪಾಳ್ಯದಲ್ಲಿ ಕಾಲಭೈರವೇಶ್ವರ ಸ್ವಾಮಿ ಹಾಗೂ ಮುನೇಶ್ವರಸ್ವಾಮಿ ದೇವಾಲಯ ಟ್ರಸ್ಟ್ನಿಂದ 22ನೇ ವಾರ್ಷಿಕೋತ್ಸವದ ಅಂಗವಾಗಿ ಮೇ 20ರಂದು ಮಧ್ಯಾಹ್ನ 12.40ಕ್ಕೆ ಸರ್ವ ಧರ್ಮೀಯರ ಸಾಮೂಹಿಕ ವಿವಾಹ ನಡೆಯಲಿದೆ.
ವಧು, ವರರಿಗೆ ನೂತನ ವಸ್ತ್ರ, ಚಿನ್ನದ ತಾಳಿ, ಕಾಲುಂಗುರವನ್ನು ಉಚಿತವಾಗಿ ವಿತರಿಸಲಾಗುವುದು. ಸಾಮೂಹಿಕ ಅನ್ನದಾನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ 93533 95799 ಸಂಪರ್ಕಿಸಬಹುದು ಎಂದು ಮುಖಂಡ ಎಚ್.ಎಂ. ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.