ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಹಂದಿ ಬೇಟೆ: ಐವರ ಬಂಧನ

Last Updated 15 ಮೇ 2019, 13:10 IST
ಅಕ್ಷರ ಗಾತ್ರ

ರಾಮನಗರ: ಬಿಡದಿ ಹೋಬಳಿಯ ಹುಲ್ತಾರ್‌ ಅರಣ್ಯ ಪ್ರದೇಶದಲ್ಲಿ ಕಾಡು ಹಂದಿಯನ್ನು ಬೇಟೆಯಾಡಿ ಮಾಂಸ ಹಂಚಿಕೊಳ್ಳುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬುಧವಾರ ಬಂಧಿಸಿದ್ದಾರೆ.

ಕಾಕರಾಮನಹಳ್ಳಿ ನಿವಾಸಿ ವೀರಭದ್ರಯ್ಯ (40), ಗಾಣಗಲ್‌ ನಿವಾಸಿ ಸಿದ್ದರಾಜು (61), ಕೆಂಪನಹಳ್ಳಿ ನಿವಾಸಿ ರಾಮಚಂದ್ರಯ್ಯ (26), ಪಾದರಹಳ್ಳಿಯ ಮೋಹನ್‌ಕುಮಾರ್ (33), ಮುದ್ದಾಪುರ ಕರೇನಹಳ್ಳಿಯ ವೆಂಕಟರಮಣಪ್ಪ (61) ಬಂಧಿತರು.

ಇವರು ಕಾಡಿನಲ್ಲಿ ಸಿಡಿಮದ್ದಿನ ಉಂಡೆ ಇಟ್ಟು ಹಂದಿಯನ್ನು ಬೇಟೆಯಾಡಿದ್ದರು. ಬಳಿಕ ಅದರ ಮಾಂಸವನ್ನು ಹಂಚಿಕೊಳ್ಳುವ ಸಂದರ್ಭ ದಾಳಿ ಮಾಡಿ ಬಂಧಿಸಲಾಯಿತು ಎಂದು ವಲಯ ಅರಣ್ಯಾಧಿಕಾರಿ ದಾಳೇಶ್‌ ತಿಳಿಸಿದರು. ಬಿಡದಿ ಉಪ ವಲಯ ಅರಣ್ಯಾಧಿಕಾರಿ ನೇತೃತ್ವದ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT