ನಗರಸಭೆ ಪೌರಾಯುಕ್ತ ನಂದಕುಮಾರ್ ನೇತೃತ್ವದ ತಂಡವು ಪೊಲೀಸರ ಸಹಯೋಗದೊಂದಿಗೆ ನಗರದ ವಿವಿಧ ಸೂಪರ್ ಮಾರ್ಕೆಟ್, ಬಾರ್ ಮತ್ತು ರೆಸ್ಟೋರೆಂಟ್, ಆಭರಣ ಮಾರಾಟ ಮಳಿಗೆಗಳು, ಮೊಬೈಲ್ ಮಾರಾಟ ಮಳಿಗೆಗಳು ಮೊದಲಾದ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಈ ಸಂದರ್ಭ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದವರಿಗೆ ದಂಡ ವಿಧಿಸಲಾಯಿತು. ಜೊತೆಗೆ ಸಾಮಾಜಿಕ ಅಂತರ ಪಾಲನೆ ಮಾಡದ ಮಾಲೀಕರಿಗೂ ದಂಡ ಬಿದ್ದಿತು. ಜೊತೆಗೆ, ನಿಷೇಧಿತ ಪ್ಲಾಸ್ಟಿಕ್ ಮಾರುತ್ತಿದ್ದ ಮತ್ತು ಬಳಸುತ್ತಿದ್ದ ವರ್ತಕರಿಗೂ ದಂಡ ಹಾಕಲಾಯಿತು.