ಸಾತನೂರು ವಲಯ ಅರಣ್ಯ ಅಧಿಕಾರಿ ಆಶಾ ತಮ್ಮ ಸಿಬ್ಬಂದಿ ಜತೆಗೂಡಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ರಾತ್ರಿ ಆಗಿದ್ದರಿಂದ ತುಂಬಾ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿದರು. ಚಿರತೆ ನೋಡಲು ಸೇರಿದ್ದ ಜನರನ್ನು ಕೋಳಿ ಫಾರಂನಿಂದ ದೂರ ಕಳುಹಿಸಿದರು. ಚೀಪಿನಲ್ಲಿ ಫಾರಂ ಬಳಿ ಹೋಗಿ ಬಾಗಿಲನ್ನು ತೆಗೆದಿದ್ದಾರೆ. ಬಳಿಕ ಚಿರತೆ ಅಲ್ಲಿಂದ ಸುರಕ್ಷಿತವಾಗಿ ಹೊರಗೆ ಓಡಿ ಹೋಗಿದೆ.