ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರದ ವಿಜ್ಞಾನಿ ಡಾ. ದಿನೇಶ, ಎಂ.ಎಸ್. ಮಾತನಾಡಿ, ತಾಲ್ಲೂಕಿನಲ್ಲಿ ಬಹುತೇಕ ರೈತರು ದೀರ್ಘಾವಧಿ ತಳಿಗಳಾದ ಎಂ.ಆರ್.-1 ಮತ್ತು ಎಂ.ಆರ್. 6 ಬೆಳೆಯುತ್ತಿದ್ದಾರೆ. ಜುಲೈ ತಿಂಗಳಿನಲ್ಲಿ ಮಳೆ ಸರಿಯಾದ ಪ್ರಮಾಣದಲ್ಲಿ ಬೀಳದೆ ಬಿತ್ತನೆ ತಡವಾದಾಗ ಈ ತಳಿಗಳ ಬಿತ್ತನೆ ಕಷ್ಟವಾಗಿತ್ತು. ಆದ್ದರಿಂದ ಕೃಷಿ ವಿಜ್ಞಾನ ಕೇಂದ್ರವು ಸುಧಾರಿತ ಮಧ್ಯಮಾವಧಿ ತಳಿ ಎಂ.ಎಲ್.-322 ಅನ್ನು ಜಿಲ್ಲೆಯ ರೈತರಿಗೆ ಮುಂಚೂಣಿ ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಿದೆ. ಈ ವರ್ಷ ಮಳೆ ಕಡಿಮೆಯಾದರೂ ಸಹ ಎರಡು ಸಂರಕ್ಷಣಾ ನೀರಾವರಿ ನೀಡಿ ಪೆಮ್ಮನಹಳ್ಳಿ ರೈತ ಗಂಗಹನುಮಯ್ಯ ಉತ್ತಮವಾಗಿ ಬೆಳೆದಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ ಎಂದರು.