<p><strong>ಹಾರೋಹಳ್ಳಿ</strong>: ಉದ್ಯೋಗ ಅನಿವಾರ್ಯ, ವ್ಯವಸಾಯ ಆಸಕ್ತಿ. ಎರಡರಲ್ಲೂ ಸೈ ಎನಿಸಿಕೊಂಡು ಮಾದರಿ ವ್ಯವಸಾಯದಲ್ಲಿ ಗುರುತಿಸಿಕೊಂಡಿರುವ ಯುವಕನ ಕಥೆ ಇದು.</p>.<p>ಹಾರೋಹಳ್ಳಿ ತಾಲ್ಲೂಕಿನ ಮರಳವಾಡಿ ಹೋಬಳಿಯ ಪುರದೊಡ್ಡಿ ಗ್ರಾಮದ ಕೆ.ಪ್ರಶಾಂತ್ ಎನ್ನುವ ಯುವಕ ಹಲವಾರು ಪ್ರಾಯೋಗಿಕ ಬೆಳೆ ಬೆಳೆಯುವ ಮೂಲಕ ತಂದೆ ಕೆಂಪೇಗೌಡರ ವ್ಯವಸಾಯಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ.</p><p>ಬೆಂಗಳೂರಿನ ಬಯೋಕಾನ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಪ್ರಶಾಂತ್, ಉದ್ಯೋಗದ ಜೊತೆ ಜೊತೆಗೇ ವ್ಯವಸಾಯದ ಕಡೆಗೂ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಪ್ರತಿದಿನ ಸಂಜೆ ಕೆಲಸ ಮುಗಿಸಿ ತಮ್ಮ ತೋಟಕ್ಕೆ ಹೋಗುತ್ತಾರೆ. ಅಲ್ಲಿ ತೋಟದ ಕೆಲಸ, ಬೆಳೆ ಎಲ್ಲವನ್ನೂ ನೋಡಿ ನಂತರವೇ ಮನೆಗೆ ಹೋಗುತ್ತಾರೆ. </p><p>ಬಾಳೆ, ತೆಂಗು, ಸಪೋಟ, ಹಲಸು, ಚೀಪೆ, ಮಾವು ಸೇರಿದಂತೆ ಹಲವಾರು ಬೆಳೆಗಳನ್ನು ತಮ್ಮ ತೋಟದಲ್ಲಿ ಬೆಳೆಯುತ್ತಿದ್ದಾರೆ. ಸುಮಾರು 2200 ಗುಳಿಗಳ ಬಾಳೆ ಹಾಕಿದ್ದಾರೆ. ಎಲ್ಲಾ ಕಾಲದಲ್ಲೂ ತೋಟದಲ್ಲಿ ಬಾಳೆ ಇರುವಂತೆ ನೋಡಿಕೊಂಡಿದ್ದಾರೆ.</p><p>ಪ್ರಶಾಂತ್ ಅವರ ತಂದೆ ಕೆಂಪೇಗೌಡರು ಹುಟ್ಟು ವ್ಯವಸಾಯಗಾರರು. ತೆಂಗು ಮತ್ತು ಮಾವಿನ ಗಿಡಗಳನ್ನು ಪೋಷಿಸಿ ಬೆಳೆಸಿದ್ದಾರೆ. ಅವರ ದಾರಿಯಲ್ಲಿ ಮಗ ಪ್ರಶಾಂತ್ ಕೂಡ ಸಾಗುತ್ತಿದ್ದು, ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಮಹದಾಸೆ ಇವರದು.</p><p>ತೋಟದಲ್ಲಿ 2200 ಬಾಳೆ, 400 ಮಾವು, 20 ಹಲಸು, 50 ಸಪೋಟ, 20 ನಿಂಬೆ ಗಿಡ ಬೆಳೆಸಿದ್ದಾರೆ. ಜೊತೆಗೆ ತೆಂಗಿನ ಮರ, ಚೀಪೇ ಸೇರಿದಂತೆ ಹಲವಾರು ಗಿಡಗಳನ್ನು ಬೆಳೆಸಿದ್ದಾರೆ. ಮುಂದೆ ಮೆಣಸು ಮತ್ತು ಏಲಕ್ಕಿ ಬೆಳೆಸುವ ತಯಾರಿಯಲ್ಲಿದ್ದಾರೆ.</p><p>ವಾರ್ಷಿಕ ಸುಮಾರು ₹12 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವ ಪ್ರಶಾಂತ್, ಮೂರರಿಂದ ನಾಲ್ಕು ಲಕ್ಷ ಖರ್ಚು ಮಾಡುತ್ತಿದ್ದಾರೆ. ಹನಿ ನೀರಾವರಿ ಅಳವಡಿಸಿದ್ದು ಅದಕ್ಕಾಗಿ ಎರಡೂವರೆ ಲಕ್ಷ ಲೀಟರ್ ನೀರು ಹಿಡಿಸುವ ಒಂದು ದೊಡ್ಡ ತೊಟ್ಟಿ ನಿರ್ಮಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾರೋಹಳ್ಳಿ</strong>: ಉದ್ಯೋಗ ಅನಿವಾರ್ಯ, ವ್ಯವಸಾಯ ಆಸಕ್ತಿ. ಎರಡರಲ್ಲೂ ಸೈ ಎನಿಸಿಕೊಂಡು ಮಾದರಿ ವ್ಯವಸಾಯದಲ್ಲಿ ಗುರುತಿಸಿಕೊಂಡಿರುವ ಯುವಕನ ಕಥೆ ಇದು.</p>.<p>ಹಾರೋಹಳ್ಳಿ ತಾಲ್ಲೂಕಿನ ಮರಳವಾಡಿ ಹೋಬಳಿಯ ಪುರದೊಡ್ಡಿ ಗ್ರಾಮದ ಕೆ.ಪ್ರಶಾಂತ್ ಎನ್ನುವ ಯುವಕ ಹಲವಾರು ಪ್ರಾಯೋಗಿಕ ಬೆಳೆ ಬೆಳೆಯುವ ಮೂಲಕ ತಂದೆ ಕೆಂಪೇಗೌಡರ ವ್ಯವಸಾಯಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ.</p><p>ಬೆಂಗಳೂರಿನ ಬಯೋಕಾನ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಪ್ರಶಾಂತ್, ಉದ್ಯೋಗದ ಜೊತೆ ಜೊತೆಗೇ ವ್ಯವಸಾಯದ ಕಡೆಗೂ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಪ್ರತಿದಿನ ಸಂಜೆ ಕೆಲಸ ಮುಗಿಸಿ ತಮ್ಮ ತೋಟಕ್ಕೆ ಹೋಗುತ್ತಾರೆ. ಅಲ್ಲಿ ತೋಟದ ಕೆಲಸ, ಬೆಳೆ ಎಲ್ಲವನ್ನೂ ನೋಡಿ ನಂತರವೇ ಮನೆಗೆ ಹೋಗುತ್ತಾರೆ. </p><p>ಬಾಳೆ, ತೆಂಗು, ಸಪೋಟ, ಹಲಸು, ಚೀಪೆ, ಮಾವು ಸೇರಿದಂತೆ ಹಲವಾರು ಬೆಳೆಗಳನ್ನು ತಮ್ಮ ತೋಟದಲ್ಲಿ ಬೆಳೆಯುತ್ತಿದ್ದಾರೆ. ಸುಮಾರು 2200 ಗುಳಿಗಳ ಬಾಳೆ ಹಾಕಿದ್ದಾರೆ. ಎಲ್ಲಾ ಕಾಲದಲ್ಲೂ ತೋಟದಲ್ಲಿ ಬಾಳೆ ಇರುವಂತೆ ನೋಡಿಕೊಂಡಿದ್ದಾರೆ.</p><p>ಪ್ರಶಾಂತ್ ಅವರ ತಂದೆ ಕೆಂಪೇಗೌಡರು ಹುಟ್ಟು ವ್ಯವಸಾಯಗಾರರು. ತೆಂಗು ಮತ್ತು ಮಾವಿನ ಗಿಡಗಳನ್ನು ಪೋಷಿಸಿ ಬೆಳೆಸಿದ್ದಾರೆ. ಅವರ ದಾರಿಯಲ್ಲಿ ಮಗ ಪ್ರಶಾಂತ್ ಕೂಡ ಸಾಗುತ್ತಿದ್ದು, ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಮಹದಾಸೆ ಇವರದು.</p><p>ತೋಟದಲ್ಲಿ 2200 ಬಾಳೆ, 400 ಮಾವು, 20 ಹಲಸು, 50 ಸಪೋಟ, 20 ನಿಂಬೆ ಗಿಡ ಬೆಳೆಸಿದ್ದಾರೆ. ಜೊತೆಗೆ ತೆಂಗಿನ ಮರ, ಚೀಪೇ ಸೇರಿದಂತೆ ಹಲವಾರು ಗಿಡಗಳನ್ನು ಬೆಳೆಸಿದ್ದಾರೆ. ಮುಂದೆ ಮೆಣಸು ಮತ್ತು ಏಲಕ್ಕಿ ಬೆಳೆಸುವ ತಯಾರಿಯಲ್ಲಿದ್ದಾರೆ.</p><p>ವಾರ್ಷಿಕ ಸುಮಾರು ₹12 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವ ಪ್ರಶಾಂತ್, ಮೂರರಿಂದ ನಾಲ್ಕು ಲಕ್ಷ ಖರ್ಚು ಮಾಡುತ್ತಿದ್ದಾರೆ. ಹನಿ ನೀರಾವರಿ ಅಳವಡಿಸಿದ್ದು ಅದಕ್ಕಾಗಿ ಎರಡೂವರೆ ಲಕ್ಷ ಲೀಟರ್ ನೀರು ಹಿಡಿಸುವ ಒಂದು ದೊಡ್ಡ ತೊಟ್ಟಿ ನಿರ್ಮಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>