ಚಾಮುಂಡೇಶ್ವರಿ ದೇವಿಗೆ ಸಂಪಿಗೆ ಹಾರ ಅರ್ಪಿಸಿದ ಅವರು, ಈಡುಗಾಯಿ ಒಡೆದು ನಮಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಸುದೀಪ್ ಅವರನ್ನು ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಶಾಲು ಹೊದಿಸಿ ಸನ್ಮಾನಿಸಿದರು. ಚಾಮುಂಡೇಶ್ವರಿ ದೇವಿಯ ದೊಡ್ಡ ಭಾವಚಿತ್ರ ನೀಡಿ, ಕೃಷ್ಣ ರುಕ್ಮಿಣಿಯ ವಿಗ್ರಹವನ್ನು ನೀಡಿದರು.