ಅಗ್ನಿಕೊಂಡದ ಹಿಂದಿನ ದಿನ ಮಂಗಳವಾರ ಬೆಳಿಗ್ಗೆ ಮಾರಮ್ಮ ದೇವಾಲಯದಲ್ಲಿ ಗಣಪತಿ ಪೂಜೆ, ಸ್ವಸ್ತಿವಾಹನ, ಅಂಕುರಾರ್ಪಣೆ, ಧ್ವಜಾರೋಹಣ, ನವಗ್ರಹ ಹೋಮ ನಡೆಯಿತು. ಸಂಜೆ 4 ಗಂಟೆಗೆ ಅಗ್ನಿಕೊಂಡಕ್ಕೆ ಯಳವಾರ ಸೌದೆಗಳನ್ನು ತಂದು ಜೋಡಿಸಿ ರಾತ್ರಿ 10 ಗಂಟೆಗೆ ಅರ್ಚಕರು ಪೂಜೆ ಸಲ್ಲಿಸಿದ ನಂತರ ಅಗ್ನಿಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.