ಚನ್ನಪಟ್ಟಣದ ಎಸ್ಎಲ್ಎನ್ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗೇಶ್ವರ್ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ 57 ಕೆ.ಜಿ. ತೂಕದ ಕೇಕ್ ಕತ್ತರಿಸಿದರು. ಆದರೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಪರಸ್ಪರ ದೈಹಿಕ ಅಂತರ ನಿಯಮ ಪಾಲನೆ ಮಾತ್ರ ಕಣ್ಮರೆ ಆಗಿತ್ತು. ಸಿಪಿವೈಗೆ ಕೇಕ್ ತಿನ್ನಿಸಲು ಹಾಗೂ ಫೋಟೊ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಇದೇ
ಸಂದರ್ಭ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದ್ದು, 200 ಯುನಿಟ್ಗೂ ಹೆಚ್ಚು ರಕ್ತ ಸಂಗ್ರಹವಾಯಿತು. ಯೋಗೇಶ್ವರ್ ಪತ್ನಿ ಶೀಲಾ ಸಹ ರಕ್ತದಾನ ಮಾಡಿದರು.