ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅವರು, ‘ಕಾದಾಟದ ಸಂದರ್ಭದಲ್ಲಿ ಆನೆಗಳು ಎದುರಾಳಿ ಆನೆಯ ಬಾಲವನ್ನು ತುಂಡರಿಸುತ್ತವೆ. ಇಲ್ಲೂ ಅದೇ ರೀತಿ ಆಗಿದೆ. ಹೊಡೆದಾಟದ ನಂತರ ನೊಣಗಳು ಹಾಗೂ ಕೀಟಗಳಿಂದ ಗಾಯವನ್ನು ರಕ್ಷಿಸಿಕೊಳ್ಳಲು ಆನೆ ನೀರಿನಲ್ಲಿ ಹೋಗಿ ನಿಂತಿದೆ. ನೀರಿನಿಂದ ಅದು ಮೇಲೆ ಬರುತ್ತಿಲ್ಲ’ ಎಂದರು.