6 ದಿನಗಳ ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಹಾಗೂ ಇನ್ನಿತರ ಇಲಾಖೆಗಳು ಮತ್ತು ಸಂಸ್ಥೆಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಮಾಹಿತಿ ಕೊಡಲಾಯಿತು. ರೈತರಿಗೆ ಜೇನ್ನೊಣ ಗೂಡಿನ ಒಳರಚನೆ, ಜೇನು ಕುಟುಂಬಗಳ ನಿರ್ವಹಣೆ, ಜೇನು ಕುಟುಂಬ ವಿಭಜನೆ ಮತ್ತು ಒಂದುಗೂಡುವಿಕೆ, ಜೇನು ತುಪ್ಪದ ಕೊಯ್ಲು ಮತ್ತು ಪರೀಕ್ಷೆ, ಜೇನು ಸಂಸ್ಕರಣೆ ಮತ್ತು ಜೇನು ಮೇಣ ಸಂಸ್ಕರಣೆ ಹಾಗೂ ಸಕರ್ಾರದಿಂದ ಜೇನು ಸಾಕಾಣಿಕೆಗೆ ನೀಡುವ ಯೋಜನೆಗಳು ಮತ್ತು ಎಫ್.ಎಸ್.ಎಸ್.ಎ.ಐ. ಲೈಸೆನ್ಸ್ ಪಡೆಯುವ ವಿಧಾನ ಕುರಿತು ಮಾಹಿತಿ ನೀಡಲಾಯಿತು.