ಉಯ್ಯಂಬಳ್ಳಿ ಹೋಬಳಿ ಕೊಗ್ಗೆದೊಡ್ಡಿ ಗ್ರಾಮದ ಚೆನ್ನಪ್ಪ (60) ಗಾಯಗೊಂಡಿರುವ ವ್ಯಕ್ತಿಯಾಗಿದ್ದಾರೆ. ಇವರು ಕಾಡಿನಲ್ಲಿ ದನಗಳನ್ನು ಮೇಯಿಸುತ್ತಿದ್ದರು. ತಪ್ಪಿಸಿಕೊಂಡಿದ್ದ ಹಸುವನ್ನು ಮೂರುದಿನದಿಂದ ಹುಡುಕಾಡುತ್ತಿದ್ದರು. ಭಾನುವಾರ ಮತ್ತೆ ತಪ್ಪಿಸಿಕೊಂಡಿದ್ದ ಜಾಗದಲ್ಲಿ ಹುಡುಕಾಡುತ್ತಿದ್ದಾಗ ಕೊಗ್ಗೆದೊಡ್ಡಿ ಸಮೀಪದ ಹೊಸ್ತಿಹಳ್ಳದ ಬಳಿ ಕಾಡೆಮ್ಮೆಯು ಹಿಂಬದಿಯಿಂದ ತನ್ನ ಕೋಡಿನಲ್ಲಿ ತಿವಿದಿದೆ. ಕಾಡೆಮ್ಮೆ ತಿವಿದ ರಬಸಕ್ಕೆ ಚೆನ್ನಪ್ಪ ಹಳ್ಳಕ್ಕೆ ಬಿದ್ದಿದ್ದಾರೆ.