<p><strong>ರಾಮನಗರ: </strong>ಕೋವಿಡ್ ಹಿನ್ನೆಲೆಯಲ್ಲಿ ನಗರದ ದೇಗುಲಗಳಲ್ಲಿಯೂ ಕರಗ ಆಚರಣೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು, ಭಕ್ತರಲ್ಲಿ ನಿರಾಸೆ<br />ಮೂಡಿಸಿದೆ.</p>.<p>ರಾಮನಗರದಲ್ಲಿ ಕರಗ ಮಹೋತ್ಸವ ಪ್ರಮುಖ ಆಚರಣೆ ಆಗಿದೆ. ಸಪ್ತ ಮಾತೃಕೆಯರ ಆರಾಧನೆಯು ವಿಶಿಷ್ಟ ಬಗೆಯಲ್ಲಿ ನಡೆಯುತ್ತ ಬಂದಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಹಬ್ಬ ಆಚರಣೆಗೆ ಅವಕಾಶ ಇರಲಿಲ್ಲ.</p>.<p>ಆದರೆ ದೇಗುಲಗಳ ಒಳಗೇ ಧಾರ್ಮಿಕ ಆಚರಣೆಗಳಿಗೆ ಅನುಮತಿ ಇತ್ತು. ಈ ಬಾರಿಯೂ ಆರಂಭದಲ್ಲಿ ದೇವಾಲಯಗಳಲ್ಲಿ ಈ ಆಚರಣೆ ನಡೆದಿದ್ದವು.</p>.<p>ಆದರೆ, ಸದ್ಯ ಜಿಲ್ಲಾಡಳಿತ ಈ ಧಾರ್ಮಿಕ ಆಚರಣೆಗಳ ಮೇಲೂ ನಿರ್ಬಂಧ ಹೇರಿದೆ.</p>.<p>ಕೋವಿಡ್ ನಿಯಮಾವಳಿಯಂತೆ ದೇಗುಲಗಳಲ್ಲಿ ಪೂಜೆಗೆ ಮಾತ್ರ ಅವಕಾಶ ಇದೆ. ಅದರಂತೆಯೇ ನಡೆದುಕೊಳ್ಳಬೇಕು. ಜನ ಸೇರುವಂತಹ ಯಾವುದೇ ಆಚರಣೆಗಳನ್ನು ಹಮ್ಮಿಕೊಳ್ಳಬಾರದು ಎಂದು ಸಂಬಂಧಿಸಿದ ಟ್ರಸ್ಟ್ಗಳಿಗೆ ಎಚ್ಚರಿಕೆಯ ಸಂದೇಶ ನೀಡಿದೆ. ಹೀಗಾಗಿ, ಈ ಬಾರಿಯ ಚಾಮುಂಡೇಶ್ವರಿ ಕರಗ ಆಚರಣೆ ಬಗ್ಗೆ ಭಕ್ತರಲ್ಲಿ ಗೊಂದಲಉಂಟಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ: </strong>ಕೋವಿಡ್ ಹಿನ್ನೆಲೆಯಲ್ಲಿ ನಗರದ ದೇಗುಲಗಳಲ್ಲಿಯೂ ಕರಗ ಆಚರಣೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು, ಭಕ್ತರಲ್ಲಿ ನಿರಾಸೆ<br />ಮೂಡಿಸಿದೆ.</p>.<p>ರಾಮನಗರದಲ್ಲಿ ಕರಗ ಮಹೋತ್ಸವ ಪ್ರಮುಖ ಆಚರಣೆ ಆಗಿದೆ. ಸಪ್ತ ಮಾತೃಕೆಯರ ಆರಾಧನೆಯು ವಿಶಿಷ್ಟ ಬಗೆಯಲ್ಲಿ ನಡೆಯುತ್ತ ಬಂದಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಹಬ್ಬ ಆಚರಣೆಗೆ ಅವಕಾಶ ಇರಲಿಲ್ಲ.</p>.<p>ಆದರೆ ದೇಗುಲಗಳ ಒಳಗೇ ಧಾರ್ಮಿಕ ಆಚರಣೆಗಳಿಗೆ ಅನುಮತಿ ಇತ್ತು. ಈ ಬಾರಿಯೂ ಆರಂಭದಲ್ಲಿ ದೇವಾಲಯಗಳಲ್ಲಿ ಈ ಆಚರಣೆ ನಡೆದಿದ್ದವು.</p>.<p>ಆದರೆ, ಸದ್ಯ ಜಿಲ್ಲಾಡಳಿತ ಈ ಧಾರ್ಮಿಕ ಆಚರಣೆಗಳ ಮೇಲೂ ನಿರ್ಬಂಧ ಹೇರಿದೆ.</p>.<p>ಕೋವಿಡ್ ನಿಯಮಾವಳಿಯಂತೆ ದೇಗುಲಗಳಲ್ಲಿ ಪೂಜೆಗೆ ಮಾತ್ರ ಅವಕಾಶ ಇದೆ. ಅದರಂತೆಯೇ ನಡೆದುಕೊಳ್ಳಬೇಕು. ಜನ ಸೇರುವಂತಹ ಯಾವುದೇ ಆಚರಣೆಗಳನ್ನು ಹಮ್ಮಿಕೊಳ್ಳಬಾರದು ಎಂದು ಸಂಬಂಧಿಸಿದ ಟ್ರಸ್ಟ್ಗಳಿಗೆ ಎಚ್ಚರಿಕೆಯ ಸಂದೇಶ ನೀಡಿದೆ. ಹೀಗಾಗಿ, ಈ ಬಾರಿಯ ಚಾಮುಂಡೇಶ್ವರಿ ಕರಗ ಆಚರಣೆ ಬಗ್ಗೆ ಭಕ್ತರಲ್ಲಿ ಗೊಂದಲಉಂಟಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>