ಆಹಾರ, ಹೊಸ ಬಟ್ಟೆಯೊಂದಿಗೆ ಸ್ಥಳಕ್ಕೆ ತೆರಳಿದ ಜಯಮ್ಮಗೋಪಾಲ್ ಮತ್ತು ಅವರ ಮಗ ಸುರೇಶ್, ನಿತ್ರಾಣಗೊಂಡಿದ್ದ ವೃದ್ಧರಿಗೆ ತಿಂಡಿ ತಿನ್ನಿಸಿದರು. ಕ್ಷೌರಿಕರೊಬ್ಬರನ್ನು ಕರೆಸಿಕೊಂಡು ಕ್ಷೌರ ಮಾಡಿಸಿ, ಬಿಸಿನೀರು ತರಿಸಿ ಸ್ನಾನ ಮಾಡಿಸಿದರು. ಹೊಸಬಟ್ಟೆ ತೊಡಿಸಿದರು. ಮಧ್ಯಾಹ್ನದ ತನಕ ವೃದ್ಧರೊಂದಿಗೆ ಇದ್ದು, ಯೋಗಕ್ಷೇಮ ವಿಚಾರಿಸಿ, ನಿತ್ಯ ತಿಂಡಿ ಊಟ ನೀಡುವುದಾಗಿ ತಿಳಿಸಿದರು.