ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿರುವ ಚನ್ನಪಟ್ಟಣ ನಗರಸಭೆ

Published : 5 ಸೆಪ್ಟೆಂಬರ್ 2024, 4:57 IST
Last Updated : 5 ಸೆಪ್ಟೆಂಬರ್ 2024, 4:57 IST
ಫಾಲೋ ಮಾಡಿ
Comments
ಪಕ್ಷಾಂತರ ಕಾಯಿದೆ ಅಡ್ಡಿಯಾಗುವುದೆ?
ನಗರಸಭೆಯ 9 ಮಂದಿ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಪಕ್ಷ ಸೇರಿರುವ ಕಾರಣ ಇವರ ಪಕ್ಷಾಂತರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಅಡ್ಡಿಯಾಗುವುದೇ ಎಂಬ ಚರ್ಚೆ ಆರಂಭವಾಗಿದೆ. ಜೆಡಿಎಸ್ ಚಿಹ್ನೆಯಡಿ ಗೆದ್ದು ಅಧಿಕಾರ ಅನುಭವಿಸಿ, ನಂತರ ಪಕ್ಷಾಂತರ ಮಾಡಿರುವ 9 ಮಂದಿ ಸದಸ್ಯರ ಮೇಲೆ ಜೆಡಿಎಸ್ ಪಕ್ಷಾಂತರ ಕಾಯ್ದೆಯಡಿ ಸದಸ್ಯತ್ವ ವಜಾ ಕ್ರಮ ತೆಗೆದುಕೊಳ್ಳುವ ಅವಕಾಶವಿದ್ದು, ಇದನ್ನು ಎಚ್.ಡಿ. ಕುಮಾರಸ್ವಾಮಿ ಅವರು ಜಾರಿ ಮಾಡುವರೆ ಎಂಬುದು ಕುತೂಹಲವಾಗಿದೆ. ಜೆಡಿಎಸ್ ನಲ್ಲಿ 16 ಮಂದಿ ಸದಸ್ಯರು ಗೆದ್ದಿದ್ದು, ಇವರಲ್ಲಿ 13 ಮಂದಿ ಪಕ್ಷಾಂತರ ಮಾಡಿದರೆ ಪಕ್ಷಾಂತರ ಕಾಯ್ದೆ ಅನ್ವಯವಾಗುವುದಿಲ್ಲ. ಈಗ 9 ಮಂದಿ ಪಕ್ಷಾಂತರ ಮಾಡಿದ್ದಾರೆ. ಇನ್ನೂ 4 ಮಂದಿಯನ್ನು ಕಾಂಗ್ರೆಸ್ ಸೆಳೆದುಕೊಂಡರೆ ಯಾವುದೇ ತೊಂದರೆಯಾಗುವುದಿಲ್ಲ. ಒಂದು ವೇಳೆ ಅದರಲ್ಲಿ ಕಾಂಗ್ರೆಸ್ ವಿಫಲವಾದರೆ ಪಕ್ಷಾಂತರ ಮಾಡಿರುವ ಜೆಡಿಎಸ್ ಸದಸ್ಯರ ಮೇಲೆ ಕ್ರಮಕ್ಕೆ ಮುಂದಾದರೆ ಅವರ ತಮ್ಮ ಸದಸ್ಯತ್ವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆಗ ಕಾಂಗ್ರೆಸ್ ಅಧಿಕಾರ ಪಡೆಯುವುದು ಕಷ್ಟಸಾಧ್ಯವಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT