ಸೋಮವಾರ ರಾತ್ರಿ ಆಹಾರ ಅರಸಿ ಚಿರತೆ ಗ್ರಾಮದತ್ತ ಬಂದಿದ್ದು, ಎಲ್ಲಿಯೂ ಆಹಾರ ಸಿಗದ ಕಾರಣ ಹಸಿವಿನಿಂದ ನಿತ್ರಾಣಗೊಂಡು ತೆಂಗಿನ ತೋಟದಲ್ಲೇ ಮಲಗಿತ್ತು. ಬೆಳಗ್ಗೆ ಗ್ರಾಮದ ಯುವಕರು ಇದನ್ನು ಗಮನಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಚಿರತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಹಾಕಿ ರಕ್ಷಣೆ ಮಾಡಿದರು. ನಂತರ ಸ್ಥಳಕ್ಕೆ ಬಂದ ಬನ್ನೇರುಘಟ್ಟ ಪಶುವೈದ್ಯರು ಚಿರತೆಗೆ ಪ್ರೋಟೀನ್ ಇಂಜೆಕ್ಷನ್ ನೀಡಿದರು. ತರವಾಯ ಅದನ್ನು ಅರಣ್ಯ ಇಲಾಖೆಯ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.