ಕನಕಪುರ ಪಟ್ಟಣದ ನವಾಜಿ ಬೋರೆಯಲ್ಲಿರುವ ಬೇತೆಲ್ ಐಸಿಆರ್ಎಂ ಪ್ರಾರ್ಥನಾ ಮಂದಿರದಲ್ಲಿ ಕನಕಪುರ ತಾಲ್ಲೂಕಿನ ಚಿಕ್ಕಮುದವಾಡಿ ಸಮೀಪದ ತಾಂಡವೊಂದರ ಬುಡಕಟ್ಟು ಸಮುದಾಯದ ಹತ್ತಕ್ಕೂ ಹೆಚ್ಚು ಜನರನ್ನು ಇರಿಸಲಾಗಿದೆ. ಮಂಗಳವಾರ ಅವರನ್ನು ಬೆಂಗಳೂರಿನಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಕರೆದೊಯ್ಯಲಾಗುತ್ತಿದೆ ಎಂದು ಶ್ರೀರಾಮ ಸೇನೆ ಸಂಘಟನೆ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು.