ರಾಮನಗರ: ಸಂಗಮದಲ್ಲಿ ಭಾನುವಾರ ಕಾಂಗ್ರೆಸ್ ನೇತೃತ್ವದಲ್ಲಿ ಆರಂಭಗೊಂಡ ಮೇಕೆದಾಟು ಪಾದಯಾತ್ರೆಗೆ ಬರುವವರಿಗೆ ಉಚಿತ ಪೆಟ್ರೋಲ್ ವ್ಯವಸ್ಥೆ ಮಾಡಲಾಗಿತ್ತು. ಪೆಟ್ರೋಲ್ ತುಂಬಿಸಿಕೊಳ್ಳಲು ಜನರು ಮುಗಿಬಿದ್ದರು.
ಗ್ರಾಮ ಪಂಚಾಯಿತಿಗಳಲ್ಲಿ ಈ ಮೊದಲೇ ಕೂಪನ್ಗಳನ್ನು ವಿತರಿಸಲಾಗಿತ್ತು. ಆ ಕೂಪನ್ ತಂದವರಿಗೆ ಬಂಕ್ಗಳಲ್ಲಿ 300-500 ರೂಪಾಯಿವರೆಗೆ ಪೆಟ್ರೋಲ್ ನೀಡಲಾಯಿತು. ಕನಕಪುರ-ಸಂಗಮ ರಸ್ತೆಯಲ್ಲಿನ ಬಹುತೇಕ ಪೆಟ್ರೋಲ್ ಬಂಕ್ಗಳು ಗ್ರಾಹಕರಿಂದ ತುಂಬಿದ್ದವು.