ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Elections | ರಾಮನಗರದಲ್ಲಿ ದೇವೇಗೌಡರ ಕಣ್ಣೀರು

Published 5 ಮೇ 2023, 15:41 IST
Last Updated 5 ಮೇ 2023, 15:41 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಸುಗ್ಗನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದ ಜೆಡಿಎಸ್‌ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಗದ್ಗದಿತರಾಗಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅವರು ‘ರಾಮನಗರದ ಅನೇಕ ತಾಯಂದಿರು ಅಂದು ನನಗೆ ತಮ್ಮ ಮನೆ ಮಗನಂತೆ ಅನ್ನ ಉಣಬಡಿಸಿದ್ದಾರೆ. ಇಂದು ಅವರಲ್ಲಿ ಬಹುತೇಕರು ಇಲ್ಲ. ಆದರೂ, ಅವರ ಋಣವನ್ನು ನೆನೆಯುವೆ’ ಎಂದು ಗದ್ಗದಿತರಾದರು.

‘ಯಾವ ಜನರು ಈ ದೇವೇಗೌಡನನ್ನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಮಾಡಿದರೋ ಅದೇ ಜನರ ಮುಂದೆ ಇಂದು ಕೈ ಒಡ್ಡಿ ಬಂದಿದ್ದೇನೆ. ಮಂಡ್ಯದಲ್ಲಿ ನಿಖಿಲ್‌ರನ್ನು ಕರೆದುಕೊಂಡು ಹೋಗಿ ಮೋಸದಿಂದ ಸೋಲಿಸಿದರು. ಆದರೆ, ರಾಮನಗರದ ಜನ ಹಾಗೆ ಮಾಡಬೇಡಿ. ಮುಂದೆ ರಾಜ್ಯದಲ್ಲಿ ಒಬ್ಬ ಶ್ರೇಷ್ಠ ನಾಯಕನಾಗುವ ಶಕ್ತಿ ಅವನಲ್ಲಿ ಇದೆ. ದಯವಿಟ್ಟು ಗೆಲ್ಲಿಸಿ’ ಎಂದು ಕೈ ಮುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT