‘ಯಾವ ಜನರು ಈ ದೇವೇಗೌಡನನ್ನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಮಾಡಿದರೋ ಅದೇ ಜನರ ಮುಂದೆ ಇಂದು ಕೈ ಒಡ್ಡಿ ಬಂದಿದ್ದೇನೆ. ಮಂಡ್ಯದಲ್ಲಿ ನಿಖಿಲ್ರನ್ನು ಕರೆದುಕೊಂಡು ಹೋಗಿ ಮೋಸದಿಂದ ಸೋಲಿಸಿದರು. ಆದರೆ, ರಾಮನಗರದ ಜನ ಹಾಗೆ ಮಾಡಬೇಡಿ. ಮುಂದೆ ರಾಜ್ಯದಲ್ಲಿ ಒಬ್ಬ ಶ್ರೇಷ್ಠ ನಾಯಕನಾಗುವ ಶಕ್ತಿ ಅವನಲ್ಲಿ ಇದೆ. ದಯವಿಟ್ಟು ಗೆಲ್ಲಿಸಿ’ ಎಂದು ಕೈ ಮುಗಿದರು.