ಗ್ರಾಮೀಣ ಕೂಟದಿಂದ ತಗಚಗೆರೆ, ಮುನಿಯಪ್ಪನದೊಡ್ಡಿ, ಕೆಂಚಯ್ಯನದೊಡ್ಡಿ ಅಂಗನವಾಡಿ ಕೇಂದ್ರಗಳಿಗೆ ತಲಾ ಮಕ್ಕಳು ಕೂರುವ 20 ಚಿಕ್ಕ ಕುರ್ಚಿಗಳು, 2 ದೊಡ್ಡ ಕುರ್ಚಿಗಳು, ಮಕ್ಕಳು ಕುಳಿತುಕೊಳ್ಳಲು ಜಮಖಾನ ನೀಡಲಾಯಿತು. ಸಿಡಿಪಿಒ ಕಚೇರಿಯ ವ್ಯವಸ್ಥಾಪಕಿ ಸುರೇಖಾ, ಗ್ರಾಮೀಣ ಕೂಟದ ಚನ್ನಪಟ್ಟಣ ಶಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.