ಶುಕ್ರವಾರ, 14 ನವೆಂಬರ್ 2025
×
ADVERTISEMENT
ADVERTISEMENT

ರಾಮನಗರ| ಕಾಡಾನೆಗಳ ಸಾವಿನ ಸುತ್ತ: ‘ಆನೆ ಕಾರ್ಯಪಡೆ’ಗೆ ಬೇಕಿದೆ ಸೌಕರ್ಯದ ಚಿಕಿತ್ಸೆ

ನಾಡಿಗೆ ಬರುವ ಆನೆಗಳನ್ನು ಕಾಡಿಗಟ್ಟುವ ಸಿಬ್ಬಂದಿಗೆ ಬೇಕಿದೆ ಮತ್ತಷ್ಟು ಸೌಕರ್ಯ; ಅತಂತ್ರವಾಗಿರುವ ವೃತ್ತಿಗಿಲ್ಲ ಸೇವಾ ಭದ್ರತೆ
Published : 14 ನವೆಂಬರ್ 2025, 2:19 IST
Last Updated : 14 ನವೆಂಬರ್ 2025, 2:19 IST
ಫಾಲೋ ಮಾಡಿ
Comments
ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ನಡೆಸುವ ಆನೆ ಕಾರ್ಯಪಡೆ (ಇಟಿಎಫ್) ಸಿಬ್ಬಂದಿ
ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ನಡೆಸುವ ಆನೆ ಕಾರ್ಯಪಡೆ (ಇಟಿಎಫ್) ಸಿಬ್ಬಂದಿ
ಎಂ. ರಾಮಕೃಷ್ಣಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮನಗರ
ಎಂ. ರಾಮಕೃಷ್ಣಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮನಗರ
ಆಆನೆ ಕಾರ್ಯಪಡೆ ಕಾರ್ಯಾಚರಣೆಗಾಗಿ ಕಂಪನಿಯೊಂದು 4 ವಾಹನಗಳನ್ನು ನೀಡಲು ಮುಂದೆ ಬಂದಿದೆ. ಉ‌ಳಿದಂತೆ ಇಟಿಎಫ್‌ಗೆ ಅಗತ್ಯವಿರುವ ಇತರ ಸೌಲಭ್ಯ ಮತ್ತು ಸಲಕರಣೆಗಳನ್ನು ಒದಗಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ
– ಎಂ. ರಾಮಕೃಷ್ಣಪ್ಪ ಡಿಸಿಎಫ್ ಬೆಂಗಳೂರು ದಕ್ಷಿಣ ಜಿಲ್ಲೆ
ಕಾರ್ಯಪಡೆಗೆ ಬೇಕಿರುವುದೇನು?

lಕಾರ್ಯಪಡೆಗೆ ಹೊರಗುತ್ತಿಗೆ ಆಧಾರದ ಬದಲು ಕಾಯಂ ಸಿಬ್ಬಂದಿಯನ್ನು ನೇಮಕ ಮಾಡಬೇಕು.

lಕಾರ್ಯಪಡೆಗೆ ಸದ್ಯ ಒಂದು ವಾಹನವಿದ್ದು, ಇತರ ವಾಹನಗಳನ್ನೇ ಬಳಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ, ಇಟಿಎಫ್‌ ಸಿಬ್ಬಂದಿ ಓಡಾಟಕ್ಕೆ ಪ್ರತಿ ವಲಯಕ್ಕೆ ಕನಿಷ್ಠ 3 ವಾಹನಗಳನ್ನು ನೀಡಬೇಕು.

lಕಾರ್ಯಪಡೆಯ ವಾಹನಗಳ ಚಾಲನೆಗಾಗಿಯೇ ಪ್ರತ್ಯೇಕವಾಗಿ ಚಾಲಕರನ್ನು ನೇಮಕ ಮಾಡಿಕೊಳ್ಳಬೇಕು.

lಕಾರ್ಯಾಚರಣೆ ಮೇಲೆ ನಿಗಾ ಇಡಲು ಪ್ರತಿ ವಲಯಕ್ಕೆ ತಲಾ 2 ಡ್ರೋನ್ ಕ್ಯಾಮೆರಾ ಬೇಕು.

‘ಇಟಿಎಫ್‌ ಪ್ರತ್ಯೇಕ ವಿಭಾಗವಾಗಬೇಕು’
‘ಆನೆ ಕಾರ್ಯಪಡೆ ಅರಣ್ಯ ಇಲಾಖೆಯ ಪ್ರತ್ಯೇಕ ವಿಭಾಗವಾಗಬೇಕು. ಸದ್ಯ ಹಾಲಿ ಆರ್‌ಎಫ್‌ಒಗಳೇ ಕಾರ್ಯಾಚರಣೆಯ ನೇತೃತ್ವ ವಹಿಸಬೇಕಾಗಿದೆ. ಇದರಿಂದಾಗಿ ಅವರಿಗೆ ಕಾರ್ಯೋತ್ತಡವಾಗಿದೆ. ಕಾರ್ಯಪಡೆ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವುದರಿಂದ ಇಲಾಖೆಯ ಇತರ ಸಿಬ್ಬಂದಿಯನ್ನು ಸಹ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಅದರ ಬದಲು ಕಾರ್ಯಪಡೆಗಾಗಿಯೇ ಪ್ರತ್ಯೇಕ ಆರ್‌ಎಫ್‌ಒ ಡಿಆರ್‌ಎಫ್‌ಒ ಅರಣ್ಯ ವೀಕ್ಷಕರು ಹಾಗೂ ಇತರ ಸಿಬ್ಬಂದಿಯನ್ನು ಅಗತ್ಯ ಸಂಖ್ಯೆಯಲ್ಲಿ ನೇಮಿಸಿಕೊಂಡು ಸೌಕರ್ಯ ಒದಗಿಸಬೇಕು’ ಎಂದು ಹಿರಿಯ ರೈತ ಮುಖಂಡ ಸಿ. ಪುಟ್ಟಸ್ವಾಮಿ ಸಲಹೆ ನೀಡಿದರು.
ಸಿ. ಪುಟ್ಟಸ್ವಾಮಿ ರೈತ ಮುಖಂಡ
ಸಿ. ಪುಟ್ಟಸ್ವಾಮಿ ರೈತ ಮುಖಂಡ
- ಆನೆಗೆ ಬಲಿಯಾಗಿದ್ದ ಇಟಿಎಫ್ ಸಿಬ್ಬಂದಿ
ಕನಕಪುರ ತಾಲ್ಲೂಕಿನ ಕಬ್ಬಾಳು ವ್ಯಾಪ್ತಿಯ ಕಂಚನಹಳ್ಳಿ ಅರಣ್ಯ ಪ್ರದೇಶದಲ್ಲಿ ಆಗಸ್ಟ್‌ 12ರಂದು ಆನೆ ಕಾರ್ಯಪಡೆಯು ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸುವಾಗ ಕಾಡಾನೆಯೊಂದು ನಡೆಸಿದ ದಾಳಿಗೆ ಕಾರ್ಯಪಡೆ ಸಿಬ್ಬಂದಿ ಚನ್ನಪಟ್ಟಣದ ಎಲೆಕೇರಿಯ ಶ್ರೇಯಸ್ (20) ಮೃತಪಟ್ಟಿದ್ದರು. ಡಿಪ್ಲೊಮಾ ಮುಗಿಸಿದ್ದ ಅವರು ಸಾತನೂರು ಪ್ರಾದೇಶಿಕ ಅರಣ್ಯ ವಲಯದಲ್ಲಿ ಒಂದು ವರ್ಷದಿಂದ ಆನೆ ಕಾರ್ಯಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಯಪಡೆಯ 20ಕ್ಕೂ ಹೆಚ್ಚು ಸಿಬ್ಬಂದಿ ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ಕೈಗೊಂಡಿದ್ದಾಗ ಘಟನೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT