ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ| ಜನರಿಂದ ಅನಿತಾ ಕುಮಾರಸ್ವಾಮಿಗೆ ಘೇರಾವ್, ಮುಖಂಡರೊಂದಿಗೆ ಕಿತ್ತಾಟ

Last Updated 11 ಡಿಸೆಂಬರ್ 2019, 11:00 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ನಗರಸಭೆ ಕಾರ್ಯಾಲಯದಲ್ಲಿ ಬುಧವಾರ ಸಭೆಯಲ್ಲಿ ಪಾಲ್ಗೊಂಡ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಜನರು ಘೇರಾವ್ ಹಾಕಿದ್ದು, ಜೆಡಿಎಸ್ ಮುಖಂಡರ ಜೊತೆ ಕಿತ್ತಾಟವನ್ನೂ ನಡೆಸಿದರು.

ವಿನಾಯಕ ನಗರದಲ್ಲಿ ಇರುವ ಗ್ಯಾಸ್ ಗೋಡೌನ್ ಖಾಲಿ ಮಾಡಿಸುವಂತೆ ಜನರು ಮನವಿ ಸಲ್ಲಿಸಿದ್ದು, ಅದಕ್ಕೆ ಶಾಸಕರು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕಿ ಅನಿತಾಕುಮಾರಸ್ವಾಮಿ ಎದುರೆ ರಾಮನಗರದ ನಗರಸಭೆಯ ಆವರಣದಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಹಾಗೂ ಮುಖಂಡ ರಾಜು ಪರಸ್ಪರ ಕಿತ್ತಾಡಿಕೊಂಡರು.

ಗ್ಯಾಸ್ ಗೋಡನ್ ಅನ್ನು ಸ್ಥಳಾಂತರಿಸುವಂತೆ ರಾಜು ಅನಿತಾಕುಮಾರಸ್ವಾಮಿ ರವರಲ್ಲಿ ಮನವಿ ಮಾಡಿದರು. ಮನವಿಗೆ ಶಾಸಕರು ಸಕಾರಾತ್ಮವಾಗಿ ಸ್ಪಂದಿಸದ ಕಾರಣ ರಾಜು ಅವರುಅನಿತಾ ಕಾಲಿಗೆ ಬಿದ್ದು, ಅವರ ಕಾರಿನ ಮುಂದೆ ಕುಳಿತು ಪ್ರತಿಭಟನೆಗೆ ಮುಂದಾದರು.

ಮಧ್ಯ ಪ್ರವೇಶಿಸಿದ ರಾಜಶೇಖರ್ ಸಮಸ್ಯೆಯನ್ನು ಶಾಸಕರು ಬಗೆ ಹರಿಸುತ್ತಾರೆ ಎಂದು ರಾಜುಗೆ ಹೇಳಿದ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳ ಪ್ರಾರಂಭವಾಯಿತು.ಇದರಿಂದ ಬೇಸತ್ತ ಅನಿತಾ ಅಲ್ಲಿಂದ ನಿರ್ಗಮಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT