ರಾಮನಗರ: ಮಾಗಡಿ ತಾಲ್ಲೂಕಿನಲ್ಲಿ ಮಂಗಳವಾರ ನಸುಕಿನಲ್ಲಿ ಎರಡು ಚಿರತೆಗಳು ಅರಣ್ಯ ಇಲಾಖೆ ಬೋನಿಗೆ ಬಿದ್ದಿವೆ.
ಬುಡಗಯ್ಯನಪಾಳ್ಯದಲ್ಲಿ 11 ವರ್ಷದ ಗಂಡು ಚಿರತೆ ಸೆರೆಯಾಗಿದೆ. ಬೋನಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಮುಖವೆಲ್ಲ ಗಾಯ ಮಾಡಿಕೊಂಡಿದೆ. ತಗ್ಗಿಗುಪ್ಪೆ ಗ್ರಾಮದಲ್ಲಿ ಎರಡು ವರ್ಷದ ಮತ್ತೊಂದು ಚಿರತೆ ಸೆರೆಯಾಗಿದೆ.
ಈ ತಿಂಗಳಲ್ಲಿ ಮಾಗಡಿ ತಾಲ್ಲೂಕು ಒಂದರಲ್ಲಿಯೇ ಹತ್ತಕ್ಕೂ ಹೆಚ್ಚು ಚಿರತೆಗಳು ಸೆರೆಯಾಗಿವೆ.