ರಾಮನಗರ: ಮಾಗಡಿ ತಾಲ್ಲೂಕಿನ ಗವಿ ನಾಗಮಂಗಲ ಗೇಟ್ ಬಳಿ ಮಂಗಳವಾರ ಬೆಳಗ್ಗೆ ಜೆಸಿಬಿ ವಾಹನ ಡಿಕ್ಕಿಯಾಗಿ ಬಿ.ಕಾಂ. ವಿದ್ಯಾರ್ಥಿನಿ ಚೈತ್ರಾ (20) ಸ್ಥಳದಲ್ಲೇ ಮೃತಪಟ್ಟರು.
ನಂಜಯ್ಯನಪಾಳ್ಯ ನಿವಾಸಿಯಾದ ಚೈತ್ರಾ ಕರಲಮಂಗಲ ಗ್ರಾಮದಲ್ಲಿ ಇರುವ ಡೇರಿಗೆ ಸ್ಕೂಟರಿನಲ್ಲಿ ಹಾಲು ಕೊಂಡೊಯ್ದಿದ್ದರು. ಹಾಲು ಹಾಕಿ ಮನೆಗೆ ವಾಪಸ್ ಆಗುವ ವೇಳೆ ರಾಮನಗರ- ಮಾಗಡಿ ರಸ್ತೆಯಲ್ಲಿ ಅಪಘಾತ ಸಂಭವಿಸಿತು. ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.