ಕಮಲಾಪುರಕ್ಕೆ ನೀರೊದಗಿಸುವ ಬಹು ಗ್ರಾಮ ಕುಡಿಯುವ ನೀರಿನ ಇಂಟ್ಯಾಕ್ ವೆಲ್ ಈಗಾಗಲೇ ಬರಿದಾಗಿದೆ. ಕೆಲ ದಿನಗಳಲ್ಲಿ ಎಂಜಿನ್ ಅಳವಡಿಸಬೇಕಾಗುತ್ತದೆ. ಇತ್ತ ಪಟ್ಟಣದಲ್ಲಿ ಬಾವಿ, ಕೊಳವೆ ಬಾವಿ, ಸುತ್ತಲಿನ ಸಣ್ಣ ಕೆರೆಗಳು ಬತ್ತುವ ಸ್ಥಿತಿಯಲ್ಲಿವೆ. ಬೆಳಕೋಟಾ ಜಲಾಶಯವೇ ನೀರಿಗೆ ಅಧಾರವಾಗಿದೆ. ಇಂಥ ಸನ್ನಿವೇಶದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದನ್ನು ತಡೆಯಲು ನೀರಾವರಿ ಇಲಾಖೆ ಸಿಬ್ಬಂದಿ ಕಾರ್ಯೋನ್ಮುಖವಾಗದಿರುವ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.