<p>ಕನಕಪುರ: ಜಂತು ನಿವಾರಕ ಔಷಧ ಅಡ್ಡ ಪರಿಣಾಮದಿಂದ 35ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. 20ಕ್ಕೂ ಕುರಿಗಳಿಗೆ ಕಣ್ಣು ಕಾಣದೆ ನಿತ್ರಾಣಗೊಂಡಿವೆ. </p>.<p>ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಹೆಗ್ಗನೂರುದೊಡ್ಡಿ ರೈತ ಮುತ್ತುರಾಜು ಅವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ನಾಲ್ಕೈದು ದಿನಗಳ ಹಿಂದೆ ಜಂತು ನಿವಾರಕ ಔಷಧ ಹಾಕಿಸಿದ್ದಾರೆ. ಇದು ಅಡ್ಡಪರಿಣಾಮ ಬೀರಿ ಕುರಿಗಳು ಭೇದಿ ಮಾಡಿಕೊಂಡು ನಿತ್ರಾಣಗೊಂಡಿವೆ.</p>.<p>ಕುರಿಗಳಿಗೆ ಕೊಟ್ಟಿರುವ ಜಂತು ನಾಶಕ ಔಷಧ ಪ್ರಮಾಣಕ್ಕಿಂತ ಹೆಚ್ಚು ನೀಡಿರುವುದೇ ಕುರಿಗಳ ಸಾವಿಗೆ ಕಾರಣ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಯು.ಸಿ.ಕುಮಾರ್ ತಿಳಿಸಿದ್ದಾರೆ.</p>.<p>ಕುರಿ ಸಾಕಾಣಿಕೆ ಮಾಡಿರುವ ಮುತ್ತುರಾಜು, ಪಶು ವೈದ್ಯರ ಮಾರ್ಗದರ್ಶನ ಪಡೆಯದೆ ಸ್ವಯಂ ಪ್ರೇರಣೆಯಿಂದ ಜಂತು ನಾಶಕ ಕುರಿಗಳಿಗೆ ಹಾಕಿದ್ದಾರೆ. ಅಡ್ಡಪರಿಣಾಮವಾಗಿ ಕುರಿಗಳಿಗೆ ಭೇದಿ ಮತ್ತು ಕಣ್ಣು ಕಾಣದಂತಾಗಿದೆ ಎಂದರು.</p>.<p>ಸಮಯಕ್ಕೆ ಸರಿಯಾಗಿ ಪಶು ವೈದ್ಯರು ಬಂದು ಚಿಕಿತ್ಸೆ ಕೊಡೆದ ನಿರ್ಲಕ್ಷ್ಯ ಮಾಡಿದ್ದರಿಂದ ಕುರಿಗಳು ಸಾವನ್ನಪ್ಪಿವೆ ಎಂದು ಕುರಿಸಾಕಾಣಿಕೆದಾರ ಮುತ್ತುರಾಜು ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನಕಪುರ: ಜಂತು ನಿವಾರಕ ಔಷಧ ಅಡ್ಡ ಪರಿಣಾಮದಿಂದ 35ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. 20ಕ್ಕೂ ಕುರಿಗಳಿಗೆ ಕಣ್ಣು ಕಾಣದೆ ನಿತ್ರಾಣಗೊಂಡಿವೆ. </p>.<p>ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಹೆಗ್ಗನೂರುದೊಡ್ಡಿ ರೈತ ಮುತ್ತುರಾಜು ಅವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ನಾಲ್ಕೈದು ದಿನಗಳ ಹಿಂದೆ ಜಂತು ನಿವಾರಕ ಔಷಧ ಹಾಕಿಸಿದ್ದಾರೆ. ಇದು ಅಡ್ಡಪರಿಣಾಮ ಬೀರಿ ಕುರಿಗಳು ಭೇದಿ ಮಾಡಿಕೊಂಡು ನಿತ್ರಾಣಗೊಂಡಿವೆ.</p>.<p>ಕುರಿಗಳಿಗೆ ಕೊಟ್ಟಿರುವ ಜಂತು ನಾಶಕ ಔಷಧ ಪ್ರಮಾಣಕ್ಕಿಂತ ಹೆಚ್ಚು ನೀಡಿರುವುದೇ ಕುರಿಗಳ ಸಾವಿಗೆ ಕಾರಣ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಯು.ಸಿ.ಕುಮಾರ್ ತಿಳಿಸಿದ್ದಾರೆ.</p>.<p>ಕುರಿ ಸಾಕಾಣಿಕೆ ಮಾಡಿರುವ ಮುತ್ತುರಾಜು, ಪಶು ವೈದ್ಯರ ಮಾರ್ಗದರ್ಶನ ಪಡೆಯದೆ ಸ್ವಯಂ ಪ್ರೇರಣೆಯಿಂದ ಜಂತು ನಾಶಕ ಕುರಿಗಳಿಗೆ ಹಾಕಿದ್ದಾರೆ. ಅಡ್ಡಪರಿಣಾಮವಾಗಿ ಕುರಿಗಳಿಗೆ ಭೇದಿ ಮತ್ತು ಕಣ್ಣು ಕಾಣದಂತಾಗಿದೆ ಎಂದರು.</p>.<p>ಸಮಯಕ್ಕೆ ಸರಿಯಾಗಿ ಪಶು ವೈದ್ಯರು ಬಂದು ಚಿಕಿತ್ಸೆ ಕೊಡೆದ ನಿರ್ಲಕ್ಷ್ಯ ಮಾಡಿದ್ದರಿಂದ ಕುರಿಗಳು ಸಾವನ್ನಪ್ಪಿವೆ ಎಂದು ಕುರಿಸಾಕಾಣಿಕೆದಾರ ಮುತ್ತುರಾಜು ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>