ಬೆಂಗಳೂರು ರಸ್ತೆಯ ತುಂಗಣಿ ಬಳಿ ಹೆದ್ದಾರಿಗೆ ಅಳವಡಿಸಿರುವ ರಸ್ತೆ ಉಬ್ಬು ಜೀವ ರಕ್ಷಕ ಆಗುವ ಬದಲು ಜೀವ ತೆಗೆಯುವಂತಾಗಿದೆ. ಇಲ್ಲಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬು ಅಳವಡಿಸಿ ಬೀದಿ ದೀಪ ಸೂಚನಾ ಫಲಕ ಹಾಕದಿರುವುದೆ ಅಪಘಾತಕ್ಕೆ ಕಾರಣ. ಕೂಡಲೇ ಬೀದಿದೀಪ ಅಳವಡಿಸಿ ಸೂಚನಾ ಫಲಕ ಹಾಕಬೇಕು.
ಜಯಸಿಂಹ ಕನ್ನಡ ಸೇನೆ ಅಧ್ಯಕ್ಷ
ಪೊಲೀಸರು ದಂಡ ಹಾಕುವ ಜಾಗ
ತುಂಗಣಿ ಗೇಟ್ ಬಳಿ ವಾಹನ ವೇಗವಾಗಿ ಹೋಗುವುದನ್ನು ತಡೆಗಟ್ಟಲು ರಸ್ತೆ ಉಬ್ಬು ಅಳವಡಿಸಲಾಗಿದೆ. ಆದರೆ ಪೊಲೀಸರು ಈ ಜಾಗವನ್ನು ದಂಡ ಹಾಕುವ ಜಾಗವನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿ ಪೊಲೀಸರು ಇರುವುದನ್ನು ಕಂಡ ಬೈಕ್ ಸವಾರರು ಅವರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಹೋಗಿ ಅಪಘಾತಕ್ಕೆ ಈಡಾಗುತ್ತಿದ್ದಾರೆ.
ಗಬ್ಬಾಡಿ ಕಾಡೇಗೌಡ ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ