‘ಬಸವಣ್ಣನಂತಹವರು ಹುಟ್ಟಿದ ನಾಡಿನಲ್ಲಿ ಸ್ವಾತಂತ್ರ್ಯ ಬಂದ 70 ವರ್ಷದ ನಂತರವೂ ಹಿಜಾಬ್ ಧರಿಸುವ ವಿಚಾರ ಎಲ್ಲಿಯೂ ಚರ್ಚೆ ಆಗಿರಲಿಲ್ಲ. ಇದೀಗ ಇದೇ ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿದೆ. ಮುಂದಿನ ವಿಚಾರಣೆವರೆಗೂ ಯಾವುದೇ ಧಾರ್ಮಿಕ ಆಚರಣೆಗಳನ್ನು ಶಾಲೆಗೆ ತರಬೇಡಿ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಈ ಧಾರ್ಮಿಕ ಆಚರಣೆ ವ್ಯಾಪ್ತಿಯಲ್ಲಿ ಕುಂಕುಮ, ತಾಳಿ, ಬಳೆ, ಹಿಜಾಬ್ ಎಲ್ಲವೂ ಬರುತ್ತದೆಯೇ ಎಂಬುದನ್ನು ಕಾದು ನೋಡೋಣ. ಹೈಕೋರ್ಟ್ ಪೀಠವು ಈ ಬಗ್ಗೆ ವಿಸ್ತೃತ ವಿಚಾರಣೆ ನಡೆಸಿದ್ದು, ನ್ಯಾಯಾಧೀಶರೇ ಸ್ಪಷ್ಟಪಡಿಸುವವರೆಗೂ ಕಾಯೋಣ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.