ಕಾವೇರಿ ಹೋರಾಟಕ್ಕೆ ಆದಿಚುಂಚನಗಿರಿ ಮಠವು ನೇತೃತ್ವ ವಹಿಸಿ ಮಾರ್ಗದರ್ಶನ ಮಾಡಬೇಕು. ಜೊತೆಗೆ ಬೇರೆ ಸಮುದಾಯಗಳ ಮಠಾಧೀಶರು ಹಾಗೂ ವಿವಿಧ ಸಮುದಾಯಗಳ ಸಂಘ–ಸಂಘಟನೆಗಳು ಕೂಡ ಕೈ ಜೋಡಿಸಬೇಕು
– ಸಿ. ಪುಟ್ಟಸ್ವಾಮಿ ರೈತ ಸಂಘದ ಮುಖಂಡ
ಕಾವೇರಿ ನೀರಿನ ಹೋರಾಟ ಸೇರಿದಂತೆ ರೈತಪರ ಹೋರಾಟಗಳನ್ನು ಮಠವು ಸದಾ ಬೆಂಬಲಿಸಲಿದೆ. ವ್ಯವಸ್ಥಿತ ಹೋರಾಟಕ್ಕೆ ನುರಿತವರ ಸಮಿತಿ ರಚಿಸಿ. ಅವರು ಕರೆ ಕೊಟ್ಟಾಗ ರೈತರು ಹೋರಾಟಕ್ಕೆ ಧುಮುಕಲು ತಯಾರಿರಬೇಕು
ನಮ್ಮಲ್ಲಿ ನೀರು ಸಂಗ್ರಹವು ವ್ಯವಸ್ಥಿತವಾಗಿಲ್ಲ. ನಮ್ಮ ಪಾಲಿನ ನೀರಿಗೆ ತಕ್ಕಂತೆ 11 ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿ ಮಾಡಲು ಸಾಧ್ಯವಾಗಿಲ್ಲ. ತಮಿಳುನಾಡು 15 ಲಕ್ಷ ಹೆಕ್ಟೇರ್ಗೂ ಮೀರಿ ನೀರಾವರಿ ಮಾಡಿಕೊಂಡಿದೆ