<p><strong>ಮಾಗಡಿ: </strong>ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೋಬಳಿ ಕೇಂದ್ರದಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೋವಿಡ್ ಆಸ್ಪತ್ರೆಯನ್ನಾಗಿಸಬೇಕು ಎಂದು ಹೋರಾಟಗಾರ ಗೊರವನಪಾಳ್ಯ ಹರೀಶ್ ಆಗ್ರಹಿಸಿದರು.</p>.<p>ಭಾನುವಾರ ತಿಪ್ಪಸಂದ್ರದ ಸರ್ಕಾರಿ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದರು.</p>.<p>ತಿಪ್ಪಸಂದ್ರ ಹೋಬಳಿ ಕೇಂದ್ರದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 50 ಹಾಸಿಗೆಗಳ ಅನುಕೂಲವಿದೆ. ಕೊಠಡಿಗಳಿವೆ. ಕೋವಿಡ್ ಸೆಂಟರ್ ಮಾಡಲು ಸೂಕ್ತವಾಗಿದೆ ಎಂದರು.</p>.<p>ತಿಪ್ಪಸಂದ್ರ ಹೋಬಳಿ ತಾಲ್ಲೂಕು ಕೇಂದ್ರದಿಂದ ದೂರದಲ್ಲಿದೆ. ಕೋವಿಡ್ ಸೋಂಕಿನಿಂದ ಸಾವುನೋವು ಅಧಿಕವಾಗಿವೆ. ನಮ್ಮ ಹೋಬಳಿಯವರೆ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೋಬಳಿ ಜನರಿಗೆ ಅನುಕೂಲ<br />ಮಾಡಿಕೊಡಲು<br />ತಿಪ್ಪಸಂದ್ರ ಗ್ರಾಮದಲ್ಲಿ ಕೋವಿಡ್ ಆಸ್ಪತ್ರೆ ಆರಂಭಿಸಲು<br />ಮುಂದಾಗಬೇಕು ಎಂದು ಡಿಸಿಎಂ ಅವರಿಗೆ ಪತ್ರ ಬರೆದು ಮನವಿ ಮಾಡಿರುವುದಾಗಿ ಪಾಳ್ಯದ ಹಳ್ಳಿ ಕಾಡುಗೊಲ್ಲರ ಹಟ್ಟಿ ಮುಖಂಡ ದಾಸೇಗೌಡ ತಿಳಿಸಿದರು.</p>.<p>ಮುಖಂಡ ಬಸವರಾಜು, ರವಿಕುಮಾರ್, ಗುಡ್ಡಯ್ಯ, ಶ್ರೀನಿವಾಸ್, ಟಿ.ಕೆ.ಶ್ರೀನಿವಾಸ್, ರಮೇಶ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ: </strong>ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೋಬಳಿ ಕೇಂದ್ರದಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೋವಿಡ್ ಆಸ್ಪತ್ರೆಯನ್ನಾಗಿಸಬೇಕು ಎಂದು ಹೋರಾಟಗಾರ ಗೊರವನಪಾಳ್ಯ ಹರೀಶ್ ಆಗ್ರಹಿಸಿದರು.</p>.<p>ಭಾನುವಾರ ತಿಪ್ಪಸಂದ್ರದ ಸರ್ಕಾರಿ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದರು.</p>.<p>ತಿಪ್ಪಸಂದ್ರ ಹೋಬಳಿ ಕೇಂದ್ರದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 50 ಹಾಸಿಗೆಗಳ ಅನುಕೂಲವಿದೆ. ಕೊಠಡಿಗಳಿವೆ. ಕೋವಿಡ್ ಸೆಂಟರ್ ಮಾಡಲು ಸೂಕ್ತವಾಗಿದೆ ಎಂದರು.</p>.<p>ತಿಪ್ಪಸಂದ್ರ ಹೋಬಳಿ ತಾಲ್ಲೂಕು ಕೇಂದ್ರದಿಂದ ದೂರದಲ್ಲಿದೆ. ಕೋವಿಡ್ ಸೋಂಕಿನಿಂದ ಸಾವುನೋವು ಅಧಿಕವಾಗಿವೆ. ನಮ್ಮ ಹೋಬಳಿಯವರೆ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೋಬಳಿ ಜನರಿಗೆ ಅನುಕೂಲ<br />ಮಾಡಿಕೊಡಲು<br />ತಿಪ್ಪಸಂದ್ರ ಗ್ರಾಮದಲ್ಲಿ ಕೋವಿಡ್ ಆಸ್ಪತ್ರೆ ಆರಂಭಿಸಲು<br />ಮುಂದಾಗಬೇಕು ಎಂದು ಡಿಸಿಎಂ ಅವರಿಗೆ ಪತ್ರ ಬರೆದು ಮನವಿ ಮಾಡಿರುವುದಾಗಿ ಪಾಳ್ಯದ ಹಳ್ಳಿ ಕಾಡುಗೊಲ್ಲರ ಹಟ್ಟಿ ಮುಖಂಡ ದಾಸೇಗೌಡ ತಿಳಿಸಿದರು.</p>.<p>ಮುಖಂಡ ಬಸವರಾಜು, ರವಿಕುಮಾರ್, ಗುಡ್ಡಯ್ಯ, ಶ್ರೀನಿವಾಸ್, ಟಿ.ಕೆ.ಶ್ರೀನಿವಾಸ್, ರಮೇಶ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>