‘ಅಂತಿಮ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಲಿ ಮತ್ತು ಅವರ ಭವಿಷ್ಯ ಒಳ್ಳೆಯದಾಗಲಿ ಎಂಬ ಸದುದ್ದೇಶದಿಂದ ಹೊಡೆದಿದ್ದು ನಿಜ. ವಿದ್ಯಾರ್ಥಿಗಳು ನಮ್ಮ ಮಕ್ಕಳೇ ಎಂಬ ಭಾವದಿಂದ ಶಿಕ್ಷೆ ನೀಡಿದ್ದೇವೆ. ತಪ್ಪಾಗಿದ್ದರೆ ಪೋಷಕರಲ್ಲಿ ಕ್ಷಮೆಯಾಚಿಸುತ್ತೇವೆ‘ ಎಂದು ಗುರುಕುಲ ವಿದ್ಯಾಮಂದಿರ ಪ್ರೌಢಶಾಲೆಯಮುಖ್ಯ ಶಿಕ್ಷಕ ಕೇಶವ ಮೂರ್ತಿ ವಿಷಾದ ವ್ಯಕ್ತಪಡಿಸಿದ್ದಾರೆ.