ರಾಮನಗರ: ರಾಜ್ಯವಷ್ಟೇ ಅಲ್ಲದೇ ದೇಶದ ಗಮನ ಸೆಳೆದಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ಮತದಾರರ ಹೃದಯ ಗೆಲ್ಲುವ ಮೂಲಕ, ಅಭೂತಪೂರ್ವ ಜಯ ದಾಖಲಿಸಿದ್ದಾರೆ. ಸತತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಸುರೇಶ್ ಅವರ ಈ ಸೋಲು ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರಿಗಾದ ಹಿನ್ನಡೆ ಎಂದೂ ವಿಶ್ಲೇಷಿಸಲಾಗುತ್ತಿದೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಶಿವಕುಮಾರ್ ಕುಟುಂಬದ ನಡುವಣ ಪ್ರತಿಷ್ಠೆಯಾಗಿದ್ದ ಈ ಚುನಾವಣೆಯಲ್ಲಿ ಗೌಡರ ಅಳಿಯ ಮಂಜುನಾಥ್ ಸಂಸತ್ ಪ್ರವೇಶ ಕ್ಷೇತ್ರದ ಮೈತ್ರಿ ಪಕ್ಷಗಳಿಗೆ ಉತ್ಸಾಹ ತುಂಬಿದೆ.
ಚುನಾವಣೆಯುದ್ದಕ್ಕೂ ಮಂಜುನಾಥ್ ಕುರಿತು ‘ಹೃದಯವಂತ’ ಎಂಬ ಮಾತುಗಳು ಕಾರ್ಯಕರ್ತರು ಮತ್ತು ಜನಸಾಮಾನ್ಯರ ಬಾಯಲ್ಲಿ ಹರಿದಾಡಿದವು. ಈ ಬಾಯಿಂದ ಬಾಯಿಗೆ ನಡೆದ ಸ್ವಯಂಪ್ರೇರಿತ ಪ್ರಚಾರದ ಅಲೆಯಲ್ಲಿ ಸುರೇಶ್ ಮಾಡಿದ ಅಭಿವೃದ್ಧಿ ಕೆಲಸ, ಅವರ ಅಣ್ಣನ ಪ್ರಭಾವ ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಸಾಧನೆಗಳು ಕೊಚ್ಚಿ ಹೋದವು. ಕ್ಷೇತ್ರದಲ್ಲಿ ದಿನದಂದಿ ದಿನಕ್ಕೆ ಏಳುತ್ತಿದ್ದ ಮಂಜುನಾಥ್ ಪರವಾದ ಅಲೆಯು ಸುನಾಮಿಯಂತೆ ಮತದಾರರನ್ನು ಆವರಿಸಿತು.ಹಿಂದಿನ ಮೂರೂ ಚುನಾವಣೆಗಳಲ್ಲಿ ಮತ ಎಣಿಕೆಗೂ ಮುಂಚೆಯೇ ಸುರೇಶ್ ಗೆಲುವು ಖಚಿತ ಎನ್ನುವ ವಾತಾವರಣ ಇರುತ್ತಿತ್ತು. ಈ ಸಲ ಅವರಿಗೆ ಎದುರಾಳಿಯಾಗಿ ಮಂಜುನಾಥ್ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಆ ವಾತಾವರಣದಲ್ಲಿ ಬದಲಾವಣೆ ಆಗತೊಡಗಿತು. ಸುರೇಶ್ ವಿರುದ್ಧ ವಿರೋಧ ಪಕ್ಷದವರು ಮಾಡಿದ ಅಧಿಕಾರ ದರ್ಪ, ದೌರ್ಜನ್ಯ ಹಾಗೂ ಒರಟು ವ್ಯಕ್ತಿತ್ವದ ಆರೋಪಗಳು ಮತದಾರರ ಮನಸ್ಸಿಗೆ ನಾಟಿದವು.
ಜಿಲ್ಲೆಯೊಳಗಿನ ಅಧಿಕಾರ ಮತ್ತು ರಾಜಕೀಯ ಸ್ಥಾನಮಾನಗಳನ್ನು ಡಿ.ಕೆ ಸಹೋದರರು ತಮ್ಮ ಒಕ್ಕಲಿಗ ಸಮುದಾಯದವರಿಗಷ್ಟೇ ನೀಡಿದ್ದು ಅಹಿಂದ ಸೇರಿದಂತೆ ಇತರ ಸಮುದಾಯಗಳಲ್ಲಿ ಅಸಮಾಧಾನದ ಹೊಗೆಯಾಗಿ ಒಳೇಟು ಕೊಟ್ಟಿತು. ಆದರೂ, ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಒಕ್ಕಲಿಗರ ಒಲವು ಮಾತ್ರ ಮಂಜುನಾಥ್ ಪರವಾಗಿ ವ್ಯಕ್ತವಾಯಿತು.
ಪಂಚಾಯಿತಿ ಮಟ್ಟದಿಂದ ಹಿಡಿದು ಜಿಲ್ಲಾ ಹಂತದ ಮೈತ್ರಿ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಅಭ್ಯರ್ಥಿಯೊಬ್ಬರಿಂದ ನಾಮಪತ್ರ ಹಿಂಪಡೆಯುವಂತೆ ಮಾಡಿದರೂ ಸುರೇಶ್ ಗೆಲುವಿನ ಸನಿಹ ಬರಲಾಗಲಿಲ್ಲ.ರಾಮನಗರದ ವೈದ್ಯಕೀಯ ಕಾಲೇಜು ಸ್ಥಳಾಂತರ ಬೆಳವಣಿಗೆ, ಅದರ ವಿರುದ್ಧ ನಡೆದ ಹೋರಾಟ, ಜಿಲ್ಲೆಯ ಹೆಸರು ಬದಲಾವಣೆಯ ಮಾತು, ಕನಕಪುರ ಕೇಂದ್ರಿತ ಅಭಿವೃದ್ಧಿಗೆ ಆದ್ಯತೆ ವಿಷಯಗಳು ಮತದಾರರನ್ನು
ಭಾವನಾತ್ಮಕವಾಗಿ ಪ್ರಭಾವಿಸಿ, ಸುರೇಶ್ ವಿರುದ್ಧದ ಮತಗಳಾಗಿ ಪರಿವರ್ತನೆಯಾಗಲು ಕಾರಣವಾದವು.
ಈ ನನ್ನ ಗೆಲುವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಶಕ್ತಿಗಿಂತ ದೊಡ್ಡದು ಬೇರಾವ ಶಕ್ತಿಯೂಡಾ. ಸಿ.ಎನ್. ಮಂಜುನಾಥ್, ವಿಜೇತ ಬಿಜೆಪಿ ಅಭ್ಯರ್ಥಿ ಬೆಂಗಳೂರು ಗ್ರಾಮಾಂತರ
ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ಕ್ಷೇತ್ರದ ಜನರ ನಂಬಿಕೆಗೆ ಧಕ್ಕೆಯಾಗದಂತೆ ಅವರ ಸೇವೆ ಮಾಡುತ್ತೇನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.