ಮತ್ತಿಕೆರೆ ಕಾಡುಗೊಲ್ಲರಹಟ್ಟಿ ಗಂಗಮಾರಯ್ಯ ಮಾತನಾಡಿ, ‘ಮಾಗಡಿ ದನಗಳ ಪರಿಷೆಯಲ್ಲಿ ಸಿನಿಮಾ ಟೆಂಟ್ಗಳು, ಕುಸ್ತಿ ಪಂದ್ಯಾವಳಿ, ಸರ್ಕಸ್, ಗರಡಿ ಗಮ್ಮತ್ತು ಇತ್ತು. ನೂರಾರು ಅರವಟಿಕೆಗಳಲ್ಲಿ ರಾಸುಗಳನ್ನು ಕಟ್ಟಿರುವ ರೈತರಿಗೆ ಅನ್ನದಾನ ನಡೆಯುತ್ತಿತ್ತು. ದಕ್ಷಿಣ ಮೈಸೂರು ಪ್ರಾಂತ್ಯದವರು ಸಾಕಿರುವ ನಾಟಿ ಹಸು, ಕರು, ಬೀಜದ ಹೋರಿಗಳನ್ನು ಖರೀದಿಸಲು ಉತ್ತರ ಕರ್ನಾಟಕದ ರೈತರು ಆಗಮಿಸುತ್ತಿದ್ದರು’ ಎಂದು ಸ್ಮರಿಸಿದರು.