ಇಲ್ಲಿನ ಜಿಲ್ಲಾ ಸಂಕೀರ್ಣದ ಮುಂಭಾಗ ಬೆಂಬಲಿಗರೊಂದಿಗೆ ಬಸವ ಜಯಂತಿ ಆಚರಿಸಿ ಅವರು ಮಾತನಾಡಿದರು. ನಾನು 5 ಬಾರಿ ಶಾಸಕ, ವಿಧಾನ ಪರಿಷತ್ ಸದಸ್ಯನಾಗಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಹೀಗಾಗಿ ಅಧಿಕಾರ ಸಿಗಲಿಲ್ಲ. ಇಂದು ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಮುಖ್ಯಮಂತ್ರಿ, ಸಚಿವರು ಯಾರೊಬ್ಬರೂ ಪ್ರಾಮಾಣಿಕರಾಗಿಲ್ಲ. ಹೀಗಾಗಿ 6 ತಿಂಗಳು ನನಗೆ ಅಧಿಕಾರ ಕೊಡಿ ಎಂದು ಆಗ್ರಹಿಸಿದರು.