ಮಾಗಡಿ: ಕುರಿಗಳ ಗೊಬ್ಬರ ಮತ್ತು ಎರೆಹುಳುವಿನಿಂದ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯ. ಇದರಿಂದ ಉತ್ತಮ ಫಸಲು ಪಡೆಯಬಹುದು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ರಾಮಕೃಷ್ಣ ತಿಳಿಸಿದರು.
ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆರಂಭವಾದ ಆರು ದಿನಗಳ ಎರೆಗೊಬ್ಬರ ತಯಾರಿಕೆ ಕೌಶಲ ಅಭಿವೃದ್ಧಿ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಸಾಯನಿಕ ಗೊಬ್ಬರವನ್ನು ಶೇ25 ರಿಂದ 50ರಷ್ಟು ಕಡಿತಗೊಳಿಸಿ, ಎರೆಹುಳು ಗೊಬ್ಬರ ಬಳಸಿದಾಗ ದೀರ್ಘಾವಧಿವರೆಗೆ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯ ಎಂದರು.
ಕೇಂದ್ರದ ವಿಜ್ಞಾನಿ ಡಾ.ಲತಾ ಆರ್.ಕುಲಕರ್ಣಿ ಮಾತನಾಡಿ, ಉದ್ಯಮಶೀಲತೆಗಾಗಿ ಎರೆಹುಳು ಗೊಬ್ಬರದ ತಾಂತ್ರಿಕತೆ ಕುರಿತು ತರಬೇತಿದಾರರಿಗೆ ಮಾಹಿತಿ ನೀಡಲಾಗುವುದು. ತರಬೇತಿ ಸೌಲಭ್ಯ ಬಳಸಿಕೊಳ್ಳಲು ಸಲಹೆ ನೀಡಿದರು.
ಮಣ್ಣು ವಿಜ್ಞಾನಿ ಪ್ರೀತು, ಬೇಸಾಯಶಾಸ್ತ್ರದ ವಿಜ್ಞಾನಿ ಡಾ.ದಿನೇಶ್ ಮಾತನಾಡಿದರು.