‘ಅಧ್ಯಕ್ಷರಿಗೆ ಆಡಳಿತ ನಡೆಸುವ ಸ್ವಂತ ಶಕ್ತಿ ಇಲ್ಲ. ಪ್ರತಿಯೊಂದಕ್ಕೂ ತಮ್ಮನ್ನು ಬೆಂಬಲಿಸಿದ ನಾಯಕರನ್ನು ಕೇಳಿಕೊಂಡು ಕೆಲಸ ಮಾಡುತ್ತಾರೆ, ತಮ್ಮ ಬೆಂಬಲಿಗರಿಗೆ ಮಾತ್ರ ಪಂಚಾಯಿತಿ ಕೆಲಸ ಕಾರ್ಯಗಳನ್ನು ನೀಡುತ್ತಾರೆ, ವಿರೋಧ ಪಕ್ಷದವರನ್ನು ನಿರ್ಲಕ್ಷ್ಯ ಮಾಡುತ್ತಾ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ಆಗುತ್ತಿಲ್ಲ’ ಎಂದು ಸಭೆಯಿಂದ ಹೊರಬಂದ ಸದಸ್ಯರಾದ ಲತಾಮಣಿ, ಸುಶೀಲಮ್ಮ, ವೆಂಕಟಸ್ವಾಮಿ, ಸಾಕಮ್ಮ, ಶಿವರತ್ನಮ್ಮ, ಭಜ್ಜಯ್ಯ, ಜಯಲಕ್ಷ್ಮಮ್ಮ ಆರೋಪಿಸಿದರು.