‘ಪ್ರತಿ ತಾಲ್ಲೂಕಿನಲ್ಲಿಯೂ ಸಹ ಶಾಸಕರ ಜತೆಗೆ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಬೇಕು. ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕು. ಆಶ್ರಯ, ಬಸವ ವಸತಿ ಯೋಜನೆ, ನರೇಗಾ ಸೇರಿದಂತೆ ವಿವಿಧ ಇಲಾಖೆಗಳಿಂದ ಯಾವುದೇ ಪ್ರಗತಿ ಆಗುತ್ತಿಲ್ಲ. ಕೆಲಸಗಳು ಸಹ ಆಗುತ್ತಿಲ್ಲ. ವಸತಿ ಅನುದಾನ ಸ್ಥಗಿತಗೊಂಡಿದೆ. ಬಡವರು ಹಣ ಬರುತ್ತದೆಂದು ಇರುವ ಮನೆ ಕೆಡವಿ ಸೂರಿಲ್ಲದೆ ಕಾಯುತ್ತಿದ್ದಾರೆ. ನರೇಗಾದಲ್ಲಿ ಕೋಟ್ಯಂತರ ರೂಪಾಯಿ ಬಾಕಿ ಬರಬೇಕಿದೆ. ಇದೆಲ್ಲವನ್ನೂ ಸರ್ಕಾರದ ಮೂಲಕ ಸರಿಪಡಿಸುವ ಕೆಲಸ ಮಾಡಬೇಕು’ ಎಂದರು.
ರೇಷ್ಮೆ ಇಲಾಖೆಯ ಮೂಲಕ ಕೆಲವರು ರೇಷ್ಮೆ ಸಾಕಾಣಿಕಾ ಮನೆಗಳನ್ನು ಕಟ್ಟಕೊಂಡಿದ್ದಾರೆ. ಅವರಿಗೂ ಹಣ ಬಿಡುಗಡೆಯಾಗಿಲ್ಲ. ಕೃಷಿ, ತೋಟಗಾರಿಕೆ ಬೆಳೆಗಳಿಗೆ ಪರಿಹಾರ ಬಂದಿಲ್ಲ. ಇಲಾಖೆಗಳ ಮೂಲಕ ಹಲವು ಸವಲತ್ತುಗಳು ದೊರೆಯುತ್ತಿದ್ದರೂ ಅವು ಜನರಿಗೆ ತಲುಪುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ‘ಶಾಸಕರು ಹಾಗೂ ಸಂಸದರು ಈ ಎಲ್ಲ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಮೂಲಕ ಬಡವರಿಗೆ ನ್ಯಾಯ ದೊರಕಿಸಬೇಕು. ಸ್ಥಗಿತಗೊಂಡಿರುವ ಎಲ್ಲ ಅನುದಾನಗಳನ್ನು ಬಿಡುಗಡೆಗೊಳಿಸುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.
ತಾ.ಪಂ. ಸದಸ್ಯರಾದ ಪ್ರಭು, ಶ್ರೀನಿವಾಸ್, ಸಿದ್ದರಾಮಯ್ಯ, ಪ್ರಕಾಶ್ ಇದ್ದರು.