ಆಹಾರ ಅರಸಿ ನೂರಾರು ಕಿ.ಮೀ. ಹೋಗುವ ರಣಹದ್ದು ತನ್ನ ಮೂಲ ನೆಲೆ ರಾಮದೇವರ ಬೆಟ್ಟಕ್ಕೆ ಮರಳಿ ಸಂಗಾತಿಯೊಂದಿಗೆ ಸೇರಿ ಮೊಟ್ಟೆ ಇಟ್ಟು ಮರಿಗೆ ಜನ್ಮನೀಡುತ್ತದೆ. ಕಳೆದ ಐದು ವರ್ಷಗಳಿಂದ ತಲಾ ಒಂದೊಂದು ಮರಿಗೆ ರಣಹದ್ದು ಜೋಡಿ ಜನ್ಮ ನೀಡುತ್ತಿವೆ.
ರಾಮಕೃಷ್ಣಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಂಗಳೂರು ದಕ್ಷಿಣ ಜಿಲ್ಲೆ
ರಾಮದೇವರ ಬೆಟ್ಟದಲ್ಲಿ ರಣಹದ್ದು ಇತ್ತೀಚಿನ ವರ್ಷಗಳಲ್ಲಿ ಮರಿ ಮಾಡಿದರೂ ಹದ್ದುಗಳ ಸಂಖ್ಯೆ ಐದಾರು ದಾಟಿಲ್ಲ. ಈ ಕುರಿತು ಅಧ್ಯಯನ ನಡೆಸಬೇಕು. ಈ ತಾಣವನ್ನು ಮತ್ತಷ್ಟು ರಣಹದ್ದು ಸ್ನೇಹಿಯಾಗಿಸಬೇಕು
ಬಿ. ಶಶಿಕುಮಾರ್ ಕಾರ್ಯದರ್ಶಿ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್