ಬಸ್ ಪಾಸ್ ಹೊಂದಿದ್ದರೂ ಖಾಸಗಿ ಬಸ್ನಲ್ಲಿ ಪ್ರಯಾಣಿಸುವುದು ನಮಗೆ ತಪ್ಪಲಿಲ್ಲ.
– ಲಿಖಿತ್, ಕಾಲೇಜು ವಿದ್ಯಾರ್ಥಿ ಹೊನ್ನಾಪುರ
ಕುದೂರು - ಬೆಂಗಳೂರು ಮಾರ್ಗದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಅಧಿಕಾರಿಗಳು ಮುಂದಾಗಬೇಕು.
– ಮಂಜುನಾಥ್, ಶಿಕ್ಷಕರು ಕುದೂರು
ತಾಲ್ಲೂಕು ಕೇಂದ್ರಕ್ಕೆ ಬಸ್ ವ್ಯವಸ್ಥೆಗೆ ಪಟ್ಟು
ಕುದೂರು ಸುತ್ತಮುತ್ತಲಿನ ಹಳ್ಳಿಗಳಿಂದ ಮಾಗಡಿಗೆ ಪ್ರತಿನಿತ್ಯ ನೂರಾರು ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಹಾಗಿದ್ದರೂ ಮಾಗಡಿ - ಗುಡೇಮಾರನಹಳ್ಳಿ - ಸೋಲೂರು, ಕುದೂರು ಮೂಲಕ ತುಮಕೂರು ನಗರಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಅನೇಕ ಬಾರಿ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆ ಈ ಭಾಗದಲ್ಲಿ ಯಶಸ್ವಿಯಾಗಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಹೆಸರೇಳಲು ಇಚ್ಛಿಸದ ಅಧಿಕಾರಿಯೊಬ್ಬರ ಅಭಿಪ್ರಾಯ.
ಕುದೂರು - ತುಮಕೂರು ಬಸ್ನಲ್ಲಿ ಉಂಟಾಗಿರುವ ಪ್ರಯಾಣಿಕರ ದಟ್ಟಣೆ
ಸೋಲೂರಿನಲ್ಲಿ ಬಸ್ ಹತ್ತಲು ಪ್ರಯಾಣಿಕರ ಪರದಾಟ
ಸರ್ಕಾರಿ ಬಸ್ ಸರಿಯಾದ ಸಮಯ ಪಾಲನೆ ಮಾಡುತ್ತಿಲ್ಲ. ಹೀಗಾಗಿ ನಮಗೆ ಕಾಲೇಜಿನಲ್ಲಿ ಎರಡು ಪಾಠದ ಅವಧಿ ಮಿಸ್ ಆಗುತ್ತಿದೆ.