ಗ್ರಾಮೀಣ ಜನರು ತಮ್ಮ ಮನೆ, ಹೊಲಗದ್ದೆಗಳನ್ನು ಮಾತ್ರ ಅಚ್ಚುಕಟ್ಟು ಮಾಡಿಕೊಳ್ಳುತ್ತಾರೆ., ಆದರೆ ಗ್ರಾಮ ಮತ್ತು ರಸ್ತೆ, ಚರಂಡಿ, ಶಾಲೆ, ದೇವಸ್ಥಾನದ ಆವರಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲ. ಅದು ನಮ್ಮದಲ್ಲ ಎಂಬ ಮನೋಭಾವ. ಅಂತಹ ಮನೋಭಾವ ಬಿಡಬೇಕು. ಗ್ರಾಮವು ಸ್ವಚ್ಛವಾಗಿದ್ದರೆ ಗ್ರಾಮದ ಜನರು ಆರೋಗ್ಯವಾಗಿರುತ್ತಾರೆ ಎಂದು ಕಿವಿಮಾತು ಹೇಳಿದರು.