ಶುಕ್ರವಾರ, 23 ಜನವರಿ 2026
×
ADVERTISEMENT
ADVERTISEMENT

ರಾಮನಗರ: ಕಾಡಾನೆ ಸೆರೆ ಕಾರ್ಯಾಚರಣೆ ಎಂಬ ಹರಸಾಹಸ

Published : 4 ಜನವರಿ 2025, 5:55 IST
Last Updated : 4 ಜನವರಿ 2025, 5:55 IST
ಫಾಲೋ ಮಾಡಿ
Comments
15 ದಿನದ ಅಂತರದಲ್ಲಿ 2 ಆನೆ ಸೆರೆ
ಇತ್ತೀಚೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ಟಸ್ಕರ್ ಹಾಗೂ ಮಖ್ನಾ (ಹೆಣ್ಣೂ ಅಲ್ಲದ, ಗಂಡೂ ಅಲ್ಲದ) ಎಂಬೆರಡು ಕಾಡಾನೆಗಳು ಹಲವು ದಿನಗಳಿಂದ ರೈತರ ಜಮೀನಿಗೆ ನುಗ್ಗಿ ಹೆಚ್ಚಿನ ಬೆಳೆಹಾನಿ ಮಾಡಿದ್ದವು. ಬೇಸತ್ತ ರೈತರು ಡಿಸೆಂಬರ್‌ನಲ್ಲಿ ಇಲಾಖೆ ಎದುರು ಅನಿರ್ದಿಷ್ಟಾವಧಿ ಧರಣಿ ಕುಳಿತಿದ್ದರು. ಕಡೆಗೆ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ರೈತ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪುಂಡಾನೆಗಳನ್ನು ಸೆರೆ ಹಿಡಿಯಲು ಸಚಿವರು ಹಾಗೂ ಮೇಲಧಿಕಾರಿಗಳೊಂದಿಗೆ ಮಾತನಾಡಿ ಅನುಮತಿ ಕೊಡಿಸಿದರು. ಅದರ ಪರಿಣಾಮವಾಗಿ ಡಿ. 21ರಂದು ಟಸ್ಕರ್ ಹಾಗೂ 28ರಂದು ಮಖ್ನಾ ಆನೆಗಳನ್ನು ಹಿಡಿದು ಕಾವೇರಿ ವನ್ಯಜೀವಿಧಾಮಕ್ಕೆ ಬಿಡಲಾಗಿತ್ತು.
ಕಾರ್ಯಾಚರಣೆಗೆ ಬೇಕು 150 ಜನ; ಕನಿಷ್ಠ ₹10 ಲಕ್ಷ ವೆಚ್ಚ
‘ಕಾಡಾನೆ ಕಾರ್ಯಾಚರಣೆಗೆ ವಿವಿಧ ಹಂತಗಳಲ್ಲಿನ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಸುಮಾರು 150 ಜನರು ಬೆವರು ಹರಿಸಬೇಕಾಗುತ್ತದೆ. ಆನೆಗಳ ಚಲನವಲನ ಪತ್ತೆಗೆ ಡ್ರೋನ್, ರಾತ್ರಿ ಚಲನವಲನ ಪತ್ತೆಗೆ ಥರ್ಮಲ್ ಡ್ರೋನ್, ಡ್ರೋನ್ ನಿರ್ವಾಹಕರು, ಟ್ರಾಕರ್ಸ್, ಸಾಕಾನೆಗಳ ಮಾವುತರು, ಕಾವಾಡಿಗರು, ವೈದ್ಯರು, ಸಹಾಯಕರು, ಆನೆ ಕಾರ್ಯಪಡೆ ಸಿಬ್ಬಂದಿ, ಸ್ಥಳೀಯ ಅಧಿಕಾರಿಗಳು, ಶಾರ್ಪ್ ಶೂಟರ್ಸ್ ದಿನವಿಡೀ ಶ್ರಮಿಸಬೇಕು. ಸಾಕಾನೆ ಕರೆಯಿಸಿ ಕಳಿಸಲು ಲಾರಿಗಳು, ಸೆರೆ ಹಿಡಿದ ಕಾಡಾನೆ ಸಾಗಿಸಲು ಕೇಜ್‌ ಲಾರಿ, ಜೆಸಿಬಿ, ಕ್ರೇನ್, ಸಿಬ್ಬಂದಿ ಓಡಾಟಕ್ಕೆ ಜೀಪುಗಳು, ಡ್ರೋನ್ ಚಾರ್ಜಿಂಗ್‌ಗೆ ಯುಪಿಎಸ್ ಬ್ಯಾಟರಿಗಳು ಬೇಕು. ಕಾರ್ಯಾಚರಣೆಯಲ್ಲಿ ಭಾಗಿಯಾಗುವವರಿಗೆ ಆಹಾರ, ವಸತಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಬೇಕು. ಸದ್ಯ ನಮ್ಮಲ್ಲಿ ಡ್ರೋನ್ ಕ್ಯಾಮೆರಾ ಇಲ್ಲದಿರುವುದರಿಂದ ದಿನಕ್ಕೆ ₹15 ಸಾವಿರದಂತೆ ಬಾಡಿಗೆ ಕೊಟ್ಟು ಕ್ಯಾಮೆರಾ ಜೊತೆಗೆ ಆಪರೇಟರ್‌ಗಳನ್ನು ಕರೆಯಿಸಬೇಕು. ಕನಿಷ್ಠ 2 ದಿನದಿಂದ ಒಂದು ವಾರದವರೆಗೆ ನಡೆಯುವ ಕಾರ್ಯಾಚರಣೆಗೆ ಏನಿಲ್ಲವೆಂದರೂ ₹10 ಲಕ್ಷದಿಂದ ₹15 ಲಕ್ಷದವರೆಗೆ ವೆಚ್ಚವಾಗುತ್ತದೆ’ ಎಂದು ಡಿಸಿಎಫ್ ಎಂ. ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT